February 21, 2026

Newsnap Kannada

The World at your finger tips!

mangala mukhi

ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಮಂಗಳಮುಖಿ ಜೋಗತಿ ಬಿಜೆಪಿಗೆ ಸೇರ್ಪಡೆ

Spread the love

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 622 ಮತ ಪಡೆದು 491 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಮಂಗಳಮುಖಿ ಸುಧಾ ಜೋಗತಿ ಬಿಜೆಪಿ ಗೆ ಸೇರಿದ್ದಾರೆ.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ರಾಜಾಪುರ ಕ್ಷೇತ್ರದಿಂದ ಸುಧಾ ಜೋಗತಿ ಆಯ್ಕೆಯಾಗಿದ್ದರು. 26 ವರ್ಷಗಳ ಆವಿರೋಧ ಆಯ್ಕೆಗೆ ತಿಲಾಂಜಲಿ ಹಾಡಿ ಈ ಬಾರಿ ಅಲ್ಲಿ ಚುನಾವಣೆ ನಡೆದಿತ್ತು.

ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಪಡೆದ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಈ ವೇಳೆ ಸುಧಾ ಜೋಗತಿಗೆ ಕೈ ಮುಗಿದು ಸಚಿವ ಆನಂದ್ ಸಿಂಗ್ ಪಕ್ಷಕ್ಕೆ ಸ್ವಾಗತಿಸಿದರು. ನಂತರ ನೂತನ ಗ್ರಾಪಂ ಸದಸ್ಯ ರನ್ನು ಸನ್ಮಾನ ಮಾಡಲಾಯಿತು.

error: Content is protected !!