ರಂಗ ಸ್ಥಳದಲ್ಲೇ ಕುಸಿದ ಯಕ್ಷಗಾನ‌ ಕಲಾವಿದ ಸಾಧು ಹೃದಯಾಘಾತದಿಂದ ಸಾವು

Team Newsnap
1 Min Read

ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಂದಾರ್ತಿ ಮೇಳದ ಪ್ರಧಾನ ವೇಷ ಧಾರಿ ಕಲಾವಿದ ಸಾಧು ಕೊಠಾರಿ (58) ರಂಗ ಸ್ಥಳದಲ್ಲೇ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ಮುನ್ನ ಕೊನೆಯುಸಿರೆಳೆದರು.‌

ಕಳೆದ 40 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ ಸಾಧು ಬಾರ್ಕೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

ಉಡುಪಿ ಜಿಲ್ಲೆಯ ಕೋಟಾ ಸಮೀಪದ
ಕಲ್ಪೆಟ್ಟುವಿನಲ್ಲಿ ಮಹಾಬಲಿ ಮಗದೇಂದ್ರ‌ ಯಕ್ಷಗಾನ ಪ್ರಸಂಗ ನಡೆಯುತ್ತಿದ್ದಾಗ ಬೆಳಗಿನ ಜಾವ 3 ಗಂಟೆಯ ವೇಳೆಗೆ ರಂಗಸ್ಥಳದಲ್ಲೇ ಕುಸಿದು ಬಿದ್ದರು.

ಕೂಡಲೇ ಕಲಾವಿದರಾದ ಸದಾಶಿವ ಅಮೀನ್ ಹಾಗೂ ಇತರ ಕಲಾವಿದರ ತಂಡ ಸಾಧು ಅವರ ವೇಷ ಬದಲಿಸಿ ಕೂಡಲೇ ಆಸ್ಪತ್ರೆ ಗೆ ಸಾಗಿಸುವ ಮುನ್ನ ಕೊನೆಯುಸಿರೆಳೆದರು.

Share This Article
Leave a comment