ಹುಬ್ಬಳ್ಳಿಯ ಸಂತೋಷ ನಗರದ ಕೆರೆಗೆ ಗಂಡ, ಹೆಂಡತಿ ಎದುರಿನಲ್ಲೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಜರುಗಿದೆ
ಸಂತೋಷ್ ನಗರದಲ್ಲಿ ಚಿಕ್ಕದಾದ ಟೀಪನ್ ರೂಂ ನಡೆಸುತ್ತಿದ್ದ ರೋಹಿತ್ ಪಟೇಲ್ ಎಂಬಾತನೇ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಬೆಳಿಗ್ಗೆ ಹೆಂಡತಿಯೊಂದಿಗೆ ಕೌಟುಂಬಿಕ ಕಲಹ ಶುರುವಾಗಿದೆ. ಹಲವಾರು ದಿನಗಳಿಂದಲೂ ದಂಪತಿಗಳ ನಡುವೆ ಗಲಾಟೆ ಇತ್ತು. ಇಂದೂ ಸಹ ಮುಂದುವರೆಯಿತು.
ಬೆಳಿಗ್ಗೆ ಗಲಾಟೆ ತಾರಕಕ್ಕೇರಿದ ನಂತರ ಗಂಡ ರೋಹಿತ್ ಪಟೇಲ್ ಸಿದಾ ಸಂತೋಷ್ ನಗರದಲ್ಲಿರುವ ಕೆರೆ ಬಳಿ ಹೋಗಿದ್ದಾನೆ. ಹೆಂಡತಿಯೂ ಆತನ ಹಿಂದೆ ಹೋಗಿದ್ದಾಳೆ. ಕೆರೆ ದಡದ ಬಳಿ ಹೋದ ಈತ ಏಕಾಏಕಿ ಹೆಂಡತಿ ಮಾತು ಕೇಳದೇ ಕೆರೆಗೆ ಹಾರೇ ಬಿಟ್ಟ.
ಆಗ ಹೆಂಡತಿ ಕೂಗಿ ಕೊಂಡು ಅಕ್ಕಪಕ್ಕದ ವರನ್ನು ಸೇರಿಸಿದಳು. ಕೆಲವರು ಕೆರೆ ಹಾರಿ ಈಜಿ ಆತನನ್ನು ಹುಡುಕುವ ಪ್ರಯತ್ನ ಮಾಡಿದರು. ಕೆರೆಯ ಆಳ ಹೆಚ್ಚಾಗಿ ದ್ದರಿಂದ ಆತ ಸಿಗಲೇ ಇಲ್ಲ.
ಹುಬ್ಬಳ್ಳಿಯ ಅಶೋಕ್ ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು