February 22, 2026

Newsnap Kannada

The World at your finger tips!

SUMA

ಜನಾಭಿಪ್ರಾಯದ ಮೇಲೆ ಭವಿಷ್ಯದ ರಾಜಕೀಯ ನಿಲುವು – ಸಂಸದೆ ಸುಮಲತಾ

Spread the love

ನನ್ನ ರಾಜಕೀಯ ಭವಿಷ್ಯದ ನಿರ್ಧಾರ ಜನಾಭಿಪ್ರಾಯದ ಮೇಲೆ ಇರುತ್ತದೆ
ಈ ಹಿಂದೆಯೂ ಆ ಪಕ್ಷ, ಈ ಪಕ್ಷ ಅಂತ ನಡೆದುಕೊಂಡಿಲ್ಲ. ಮುಂದೆಯೂ ಹಾಗೆಯೇ ಇರುತ್ತದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದರು.

ಮದ್ದೂರು ತಾಲೂಕಿನ ದೊಡ್ಡ ಅರಸಿನಕರೆಯಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಇಷ್ಟು ದಿನ ಇದ್ದುದ್ದು ಬೇರೆ. ಸಂಸದೆಯಾಗಿ ಹೆಚ್ಚಿನ ಜವಾಬ್ದಾರಿ ಇದೆ. ಮತದಾನದಲ್ಲಿ ಭಾಗವಹಿಸಿವುದು ನನ್ನ ಕರ್ತವ್ಯ ಎಂದರು.

ಗ್ರಾಮ ಪಂಚಾಯಿತಿಯಲ್ಲಿ ಬೆಂಬಲಿಗರ ಪರ ನಿಲ್ಲದೇ ಕಷ್ಟ ಏಕೆಂದರೆ
ಬೆಂಬಲಿಗರೇ ಪ್ರತಿಸ್ಪರ್ಧಿಗಳಾಗಿರುವ ಪರಿಸ್ಥಿತಿ ಇದೆ.
ಒಬ್ಬರನ್ನು ಆಯ್ಕೆ ಮಾಡಿ ಬೆಂಬಲಿಸುವುದು ಕಷ್ಟ.
ಹೀಗಾಗಿ ತಟಸ್ಥವಾಗಿದ್ದೇನೆ ಎಂದು ಹೇಳಿದರು.

ಜೆಡಿಎಸ್-ಬಿಜೆಪಿ ಹೊಂದಾಣಿಕೆ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿ
ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಕೇವಲ ರೂಮರ್ಸ್ ಅನ್ಸುತ್ತೆ.
ಯಾವುದೇ ಪಕ್ಷ ಅಧಿಕೃತವಾಗಿಲ್ಲ ಒಪ್ಪಿಕೊಂಡಿಲ್ಲ ಎಂದರು

ಮುಂದೆಯೂ ಹೀಗೆ….

ನನ್ನ ರಾಜಕೀಯ ಭವಿಷ್ಯದ ನಿರ್ಧಾರ ಜನಾಭಿಪ್ರಾಯದ ಮೇಲೆ ಇರುತ್ತದೆ.
ಈ ಹಿಂದೆಯೂ ಆ ಪಕ್ಷ, ಈ ಪಕ್ಷ ಅಂತ ನಡೆದುಕೊಂಡಿಲ್ಲ. ಮುಂದೆಯೂ ಹಾಗೆ ಇರುತ್ತದೆ ಎಂದು ಚುಟುಕಾಗಿ ಹೇಳಿದರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನೆ ವಾಗ್ವಾದಕ್ಕೆ ಯಾವುದೇ ಕಮೆಂಟ್ ನೀಡುವುದಿಲ್ಲ .
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಅವರಿಗೆ ಬಿಟ್ಟಿದ್ದು. ನಾನು ಏನೂ ಹೇಳುವುದಿಲ್ಲ ಎಂದರು.

error: Content is protected !!