ಇಳಕಲ್ ಸಿಪಿಐ ಆಯ್ಯನ್ ಗೌಡರಿಗೆ ಧಮ್ಕಿ , ಬೆದರಿಕೆ ಹಾಕಿದ ಮಾಜಿ ಶಾಸಕ

Team Newsnap
1 Min Read

ಕಾಂಗ್ರೆಸ್ ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್
ಪೋಲಿಸ್ ಠಾಣೆಗೆ ನುಗ್ಗಿ ಸಿಪಿಐಗೆ ಧಮ್ಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣ ಇಳಕಲ್ ನಲ್ಲಿ ಜರುಗಿದೆ.

ಪಿಗ್ಮಿ ಏಜೆಂಟ್ ಸಾವಿಗೆ ಸಂಬಂಧಿಸಿ ದಂತೆ ಮಾಜಿ ಶಾಸಕನಿಗೆ ನೋಟಿಸ್ ನ ನೀಡಲಾಗಿತ್ತು. ಈ ನೋಟಿಸ್ ನೀಡಿದ್ದಕ್ಕಾಗಿ ಕೋಪಗೊಂಡು ವಿಜಯಾನಂದ ಠಾಣೆಗೆ ಬೆಂಬಲಿಗರೊಂದಿಗೆ ಧಾವಿಸಿದರು.

ನಂತರ ಸಿಪಿಐ ಅಯ್ಯನ್ ಗೌಡ ಅವರೊಂದಿಗೆ ಏಕಾಏಕಿ ಮಾತಿನ ಚಕಮಕಿಯಲ್ಲಿ ತೊಡಗಿದರು. ಸಿಪಿಐಗೆ ಏಕ ವಚನದಲ್ಲೇ ಬೈಯ ತೊಡಗಿದರು.

ನೀನು ಠಾಣೆ ಬಿಟ್ಟು ಹೊರಗೆ ಬಾ, ನೋಡಿಕೊಳ್ಳುವೆ ಎಂದು ಕೈ ಶಾಸಕ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ.

ವ್ಯಕ್ತಿ ಯೊಬ್ಬರ ಸಾವಿನ ವಿಚಾರಣೆ ಮಾಡುತ್ತಿದ್ದ ಸಿಪಿಐ ಮಾಜಿ ಶಾಸಕರಿಗೂ ನೋಟಿಸ್ ನೀಡಿದ್ದು ತಪ್ಪೇ ಎಂದು ಸಿಪಿಐ ಪ್ರಶ್ನೆ ಮಾಡಿದ್ದಾರೆ.

ಇಳಕಲ್ ನಲ್ಲಿ ಪೋಲಿಸ್ ಅಧಿಕಾರಿಗೇ ಈ ರೀತಿಯಲ್ಲಿ ಧಮ್ಕಿ ಹಾಕಿದ್ದಾರೆ ಎಂದರೆ ಸಾಮಾನ್ಯ ವ್ಯಕ್ತಿಗಳ ಕಥೆ ಏನು? ಮಾಜಿ ಶಾಸಕನ ವರ್ತನೆಯನ್ನು ಖಂಡಿಸಿ ಆತನ ವಿರುದ್ಧ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ

Share This Article
Leave a comment