‘ನಾನು ಜೊತೆ ಜೊತೆಯಲಿ ಧಾರವಾಹಿ ಬಿಟ್ಟು ಎಲ್ಲೂ ಹೋಗಲ್ಲ. ಯಾವ ವದಂತಿಗಳಿಗೆ ಕಿವಿಗೊಡಬೇಡಿ.’
- ಹೀಗೆಂದು ಜೊತೆ ಜೊತೆಯಲಿ ಧಾರವಾಹಿಯ ಅನಿರುದ್ಧ ಅಲಿಯಾಸ್ ಆರ್ಯವರ್ಧನ್ ಸ್ಪಷ್ಟನೆ ನೀಡಿದ್ದಾರೆ.
ನಾನು ಜನಪ್ರಿಯ ಧಾರವಾಹಿಯ ಪಾತ್ರಕ್ಕೆ ಗುಡ್ ಬೈ ಹೇಳಿ ರಿಯಾಲಿಟಿ ಶೋ ಗೆ ಹೋಗುವುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಪ್ರಚಾರ ನಡೆದಿದೆ. ನಾನು ಎಲ್ಲೂ ಕೂಡ ನನ್ನ ನಿಲುವನ್ನು ಅಧೀಕೃತ ವಾಗಿ ಪ್ರಕಟಿಸಿಲ್ಲ. ಆದರೂ ಅಪಪ್ರಚಾರ ನಡೆದಿದೆ ಎಂದಿದ್ದಾರೆ.
ನಂಗೆ ಜೊತೆ ಜೊತೆಯಲಿ ಧಾರವಾಹಿ ನೇಮ್ , ಫೇಮ್ ತಂದುಕೊಟ್ಟಿದೆ. ನಾನು ಪಾತ್ರದಲ್ಲಿ ಸಾಕಷ್ಟು ತೃಪ್ತಿಯಿಂದ ಇದ್ದೇನೆ. ಈ ಧಾರವಾಹಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಅನಿರುದ್ಧ ಸ್ಪಷ್ಟವಾಗಿ ಹೇಳಿದ್ದಾರೆ.
ಅನಿರುದ್ಧ ಈ ಹೇಳಿಕೆಯಿಂದ ಬಿಗ್ ಬಾಸ್ ರಿಯಾಲಿಟಿ ಶೋ ಗೆ ತೆರಳುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.