ವಿಷ್ಣು ದಾದಾ ಬಗ್ಗೆ ತಪ್ಪಾಗಿ ಮಾತನಾಡಿಬಿಟ್ಟೆ : ಕ್ಷಮೆಯಾಚಿಸಿದ ತೆಲುಗು ನಟ ರಂಗರಾಜು

Team Newsnap
1 Min Read

ಕನ್ನಡಿಗರ ಹಾಗೂ ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಮಣಿದು
ನಟ ಡಾ.ವಿಷ್ಣುವರ್ಧನ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ್‌ ರಂಗರಾಜು ಇದೀಗ ತಮ್ಮ ಹೇಳಿಕೆಗೆ ಬಗ್ಗೆ ಕ್ಷಮೆಯಾಚಿಸಿ ದ್ದಾರೆ.

ಕೊರೋನಾದಿಂದ ಬಳಲಿ ಚಿಕಿತ್ಸೆ ಗೆ ಒಳಗಾಗಿರುವ ನಟ ರಂಗರಾಜು ಆಸ್ಪತ್ರೆ ಯಲ್ಲೇ ವಿಡಿಯೊ ಮಾಡಿ, ಕನ್ನಡದಲ್ಲೇ ಕ್ಷಮೆ ಯಾಚಿಸಿದ್ದಾರೆ.

ʻವಿಷ್ಣು ದಾದಾ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ತಲೆ ಕೆಟ್ಟು ಈ ರೀತಿ ಮಾತನಾಡಿದ್ದೇನೆ. ಈ ಬಗ್ಗೆ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆʼ ಎಂದು ಹೇಳಿದ್ದಾರೆ.

ವಿಜಯ್‌ ರಂಗರಾಜು ಸಂದರ್ಶನ ವೊಂದರಲ್ಲಿ ನಟ ಡಾ.ವಿಷ್ಣುವರ್ಧನ್‌ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧ ಕನ್ನಡದ ಸ್ಟಾರ್‌ ನಟರು, ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಎಚ್ಚರಿಸಿದ್ದರು.

ವಿಷ್ಣುವರ್ಧನ್ ಬಗ್ಗೆ ಹೇಳಿದ ಮಾತುಗಳ ಬಗ್ಗೆ ಪದೇ ಪದೇ ತಪ್ಪು ಮಾಡಿದೆ ಕ್ಷಮಿಸಿ ಎಂದು ಕೋರಿ ಕನ್ನಡಿಗರಿಗೆ ನಮಸ್ಕಾರ ಮಾಡಿ ಕಣ್ಣೀರು ಹಾಕಿದ್ದಾರೆ ವಿಲನ್ ರಂಗರಾಜು.

Share This Article
Leave a comment