ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಡಿ.ವೈ.ಎಸ್.ಪಿ. ವಿಜಯಲಕ್ಷ್ಮಿಗೆ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷಗಳ ಕಾಲ ಜೈಲು ವಿಧಿಸಿದೆ.
ವಿಜಯಲಕ್ಷ್ಮಿಗೆ 4 ವರ್ಷ ಸಜೆ ವಿಧಿಸಿ ಕಲಬುರ್ಗಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ಈ ತೀರ್ಪು ನೀಡಿದ್ದಾರೆ.
ಶಿಕ್ಷೆಗೆ ಗುರಿಯಾಗಿರೋ ವಿಜಯಲಕ್ಷ್ಮಿ ಈ ಹಿಂದೆ ಶಹಾಬಾದ್ ನಗರ ಠಾಣೆ
ಇನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 2015ರ ಡಿಸೆಂಬರ್ ನಲ್ಲಿ ವಿಜಯಲಕ್ಷ್ಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಪ್ರಕರಣ ಏನು?
ಶಹಾಬಾದ್ ತಾಲೂಕಿನ ದೇವನತೆಗನೂರು ಬಳಿಯ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ಹೋದ ಸಂದರ್ಭದಲ್ಲಿ ಬಂಕ್ ಸಿಬ್ಬಂದಿ ಜೊತೆಗೆ ರಾಜು ಎಂಬಾತ ಜಗಳವಾಡಿದ್ದ. ಈ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ರಾಜು ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿ ವಿರುದ್ಧ ಕ್ರಮ ಜರುಗಿಸಲು ಲಂಚ ಕೇಳಿದ್ದರು ಎಂಬ ಆರೋಪ ಸಾಬೀತಾಗಿದೆ.