ಪ್ರೀತಿಸಿ ಮದುವೆಯಾದ ಪತಿಯೂ ವರದಕ್ಷಿಣೆಗೆ ಹಿಂಸೆ: ಪತ್ನಿಯ ಆತ್ಮಹತ್ಯೆ

Team Newsnap
1 Min Read

ಜ್ಯೋತಿಷಿ ನಂಬಿ, ಗಾಢವಾಗಿ ಪ್ರೀತಿಸಿದ ಯುವತಿಯೊಬ್ಬಳು ಮನೆಯವರನ್ನು ಒಪ್ಪಿಸಿ, ಪ್ರೀತಿಸಿದವನ್ನೇ ಮದುವೆ ಯಾದಳು.

ಆದರೆ ಪತಿ ಧನರಾಜ್ ಧನದಾಯಿ ಎನ್ನುವುದು ಮದುವೆಯಾದ ಆರು ತಿಂಗಳ ನಂತರ ಗೊತ್ತಾಗಿ, ಇಲ್ಲದ ಕಿರುಕುಳ, ಹಿಂಸೆಗೆ ಬೇಸತ್ತು ಮದುವೆಯಾದ ಯುವತಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮೈಸೂರಿನಲ್ಲಿ ಜರುಗಿದೆ.

ಮೈಸೂರಿನ ದಟ್ಟಗಹಳ್ಳಿಯಲ್ಲಿ ವಾಸವಿದ್ದ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹೊಸದೊಡ್ಡಿಯ ನಿವೇದಿತಾ (೧೯) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪತಿ ಧನರಾಜ್ ಮತ್ತು ಮೃತರ ಮಾವ ಲಕ್ಕಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಧನರಾಜ್ ಮತ್ತು ನಿವೇದಿತಾ ಒಂದೇ ಗ್ರಾಮದವರು. ಪ್ರೀತಿಸಿ , ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿ ಮದುವೆ ಮಾಡಿದ್ದರು. ಮದುವೆ ವೇಳೆ ನಿವೇದಿತಾ ಮನೆಯವರು ವರದಕ್ಷಿಣೆಯಾಗಿ 85 ಗ್ರಾಂ ಚಿನ್ನವನ್ನು ನೀಡಿದ್ದರು.

ಈ ಧನರಾಜ್ ಮೈಸೂರಿನಲ್ಲಿ ಹೊಟ್ಟೆ ಪಾಡು ನೋಡಿಕೊಂಡಿದ್ದ. ಧನರಾಜ್ ಆತನ ಪತ್ನಿಗೆ ತವರಿನಿಂದ ಮತ್ತಷ್ಟು ಚಿನ್ನವನ್ನು ತರುವಂತೆ ಒತ್ತಾಯಿಸಿ ಕಿರುಕುಳ , ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ನಿವೇದಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮೃತರ ಸಹೋದರಿ ಕುವೆಂಪುನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತಿ, ಮಾವನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

Share This Article
Leave a comment