February 21, 2026

Newsnap Kannada

The World at your finger tips!

subramanya1

ಕಾರ್ತಿಕ ಸೋಮವಾರ : ಸಾಸಲು ನಾಗ ಕ್ಷೇತ್ರಕ್ಕೆ ಹರಿದು ಬಂದ ಜನಸಾಗರ

Spread the love

ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧವಾಗಿರುವ ಮಂಡ್ಯ ಜಿಲ್ಲೆಯ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ನಾಗಕ್ಷೇತ್ರ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಕ್ಷೇತ್ರದಲ್ಲಿ ಕಾರ್ತೀಕ ಸೋಮವಾರದ ಅಂಗವಾಗಿ ಹರಿದು ಬಂದ ಭಕ್ತಸಾಗರ.

ಸಾಸಲಿನ ಪುಣ್ಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ಪುಳಕಿತರಾದ ಭಕ್ತವೃಂದ ನಾಗರು, ಕಜ್ಜಿ ಸೇರಿದಂತೆ ವಿವಿಧ ಚರ್ಮರೋಗಗಳ ನಿವಾರಣೆಗೆ ಪವಿತ್ರ ಗಂಗಾಜಲವಾಗಿರುವ ಔಷಧೀಯ ಗುಣವುಳ್ಳ ಕಲ್ಯಾಣಿಯ ನೀರು ಪವಿತ್ರವಾದದ್ದು.

subramanya

ಸರತಿಯ ಸಾಲಿನಲ್ಲಿ ನಿಂತು ಮಾಸ್ಕ್ ಧರಿಸಿಕೊಂಡು ಬರುವ ಭಕ್ತವೃಂದಕ್ಕೆ ದೇವರ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವ ತಾಲೂಕು ಆಡಳಿತ ಹಾಗೂಕಿಕ್ಕೇರಿ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ಮುಡಿ ಹರಕೆ ಸಲ್ಲಿಸಿ ಪವಿತ್ರ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಮಾಡಿ ಸಂಭ್ರಮಿಸುತ್ತಿರುವ ದೃಶ್ಯವು ಸಾಮಾನ್ಯವಾಗಿತ್ತು.

ಸಣ್ಣ ಮಕ್ಕಳಿಗೆ ಹಾಲು ಹಾಗೂ ಕುಡಿಯಲು ನೀರನ್ನು ನೀಡಿ ಅನುಕೂಲ ಕಲ್ಪಿಸುತ್ತಿರುವ ಸಾಸಲು ಗ್ರಾಮಸ್ಥರು.

error: Content is protected !!