February 21, 2026

Newsnap Kannada

The World at your finger tips!

rajani

Picture credits: V4U media

ರಾಜಕೀಯ ಅರಂಗ್ರೇಟ್ ಗೆ ತಲೈವಾ ರಜನೀ ಸಿದ್ದತೆ: ಅಣ್ಣನ ಆಶೀರ್ವಾದಕ್ಕೆ ಬೆಂಗಳೂರಿಗೆ ಭೇಟಿ

Spread the love

ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯ ಅರಂಗ್ರೇಟ್ ಗೆ ದಿನಗಣನೆಗಳು ಅರಂವಾಗಿವೆ. ಸಿದ್ದತೆಗಳ ನಡುವೆಯೂ ಬೆಂಗಳೂರಿಗೆ ಧಾವಿಸಿ ಹಿರಿಯ ಸಹೋದರನ ಆಶೀರ್ವಾದ ಪಡೆದರು.

ತಮಿಳುನಾಡಿನಲ್ಲಿ ಡಿಸೆಂಬರ್ ಅಂತ್ಯದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿ ಸಕ್ರಿಯ ರಾಜಕಾರಣ ಕ್ಕೆ ಧುಮುಕುವ ಮುನ್ನ ರಜನೀಕಾಂತ್ ಹಿರಿಯ ಸಹೋದರ ಸತ್ಯನಾರಾಯಣ ಅವರ ಆಶೀರ್ವಾದ ಪಡೆಯಲು ಬಂದಿದ್ದರು.

ನಿನ್ನೆ ಬೆಂಗಳೂರಿಗೆ ಗೌಪ್ಯ ವಾಗಿ ಆಗಮಿಸಿದ ತಲೈವಾ ರಜನೀಕಾಂತ್, ತನ್ನ ಅಣ್ಣ ಸೇರಿದಂತೆ ಹಿರಿಯರ ಬಳಿ ಆಶೀರ್ವಾದ ಬೇಡಿ ತಮ್ಮ ಹೊಸ
ಪಕ್ಷಕ್ಕೆ ಶುಭ ಹಾರೈಸುವಂತೆ ಕೋರಿದರು.

rajani3

ಈ ಹಿಂದೆ ಅನಾರೋಗ್ಯ ಕಾರಣ ಹೇಳಿ ರಾಜಕೀಯದಿಂದ ದೂರ ಸರಿಯವ ಮನಸ್ಸು ಮಾಡಿದ್ದರು. ಆದರೆ ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಗೆಳೆಯರು, ಅಭಿಮಾನಿಗಳ ಒತ್ತಾಸೆಗೆ ಮಣಿದು ರಾಜಕೀಯ ಪಾದಾರ್ಪಣೆಗೆ ನಿರ್ಧಾರ ಮಾಡಿದರು.

ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ತಮ್ಮ ಸ್ವಂತ ಪಕ್ಷವನ್ನೇ ಅಧಿಕಾರಕ್ಕೆ ತರಲು ರಜನಿಕಾಂತ್ ಬಯಸಿದ್ದಾರೆ.

error: Content is protected !!