ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯ ಅರಂಗ್ರೇಟ್ ಗೆ ದಿನಗಣನೆಗಳು ಅರಂವಾಗಿವೆ. ಸಿದ್ದತೆಗಳ ನಡುವೆಯೂ ಬೆಂಗಳೂರಿಗೆ ಧಾವಿಸಿ ಹಿರಿಯ ಸಹೋದರನ ಆಶೀರ್ವಾದ ಪಡೆದರು.
ತಮಿಳುನಾಡಿನಲ್ಲಿ ಡಿಸೆಂಬರ್ ಅಂತ್ಯದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿ ಸಕ್ರಿಯ ರಾಜಕಾರಣ ಕ್ಕೆ ಧುಮುಕುವ ಮುನ್ನ ರಜನೀಕಾಂತ್ ಹಿರಿಯ ಸಹೋದರ ಸತ್ಯನಾರಾಯಣ ಅವರ ಆಶೀರ್ವಾದ ಪಡೆಯಲು ಬಂದಿದ್ದರು.
ನಿನ್ನೆ ಬೆಂಗಳೂರಿಗೆ ಗೌಪ್ಯ ವಾಗಿ ಆಗಮಿಸಿದ ತಲೈವಾ ರಜನೀಕಾಂತ್, ತನ್ನ ಅಣ್ಣ ಸೇರಿದಂತೆ ಹಿರಿಯರ ಬಳಿ ಆಶೀರ್ವಾದ ಬೇಡಿ ತಮ್ಮ ಹೊಸ
ಪಕ್ಷಕ್ಕೆ ಶುಭ ಹಾರೈಸುವಂತೆ ಕೋರಿದರು.

ಈ ಹಿಂದೆ ಅನಾರೋಗ್ಯ ಕಾರಣ ಹೇಳಿ ರಾಜಕೀಯದಿಂದ ದೂರ ಸರಿಯವ ಮನಸ್ಸು ಮಾಡಿದ್ದರು. ಆದರೆ ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಗೆಳೆಯರು, ಅಭಿಮಾನಿಗಳ ಒತ್ತಾಸೆಗೆ ಮಣಿದು ರಾಜಕೀಯ ಪಾದಾರ್ಪಣೆಗೆ ನಿರ್ಧಾರ ಮಾಡಿದರು.
ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ತಮ್ಮ ಸ್ವಂತ ಪಕ್ಷವನ್ನೇ ಅಧಿಕಾರಕ್ಕೆ ತರಲು ರಜನಿಕಾಂತ್ ಬಯಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು