ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸರ್ಕಲ್ ಬಳಿಯ
ಜನನಿಬಿಡ ಪ್ರದೇಶದಲ್ಲಿ ಯುವಕನನ್ನು ಅಟ್ಟಾಡಿಸಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಅರಳಿಕಟ್ಟೆ ಸರ್ಕಲ್ ಬಳಿ ರಂಗೋಲಿಹಳ್ಳದ ರಘು ಎಂಬಾತನನ್ನು ಕೊಚ್ಚಿ ಹತ್ಯೆ ಮಾಡಲಾಗಿದೆ.
ಮೂವರು ಯುವಕರ ಗುಂಪು ಮಚ್ಚು ಲಾಂಗು ಹಿಡಿದು ಬೈಕ್ ನಲ್ಲಿ ಬಂದು ರಘು ಮೇಲೆ ಅಟ್ಯಾಕ್ ಮಾಡಿದರು. ನಂತರ ಖಾರದ ಪುಡಿ ಎರಚಿ ರಘು ಆ ಕಡೆ ಈ ಕಡೆ ಹೋಗದಂತೆ ತಡೆದಿದ್ದಾರೆ.
ನುಗ್ಗಿ ಹೊಡೆದ ದುಷ್ಕರ್ಮಿಗಳು:
ನಂತರ ಪಾತಕಿಗಳು ಮಚ್ಚು, ಲಾಂಗ್ ಬೀಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಲು ಮಚ್ಚಿನೇಟು ತಿಂದ ರಘು ಅಲ್ಲೆ ಇದ್ದ ಟೀ ಅಂಗಡಿ ಹೊಕ್ಕಿದ್ದಾನೆ. ಅಲ್ಲಿಗೂ ಬಂದ ಮೂವರು ಯುವಕರ ಗುಂಪು ಮನಸ್ಸೊ ಇಚ್ಚೆ ರಘುವನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಹತ್ಯೆಯ ದೃಶ್ಯ ಸೆರೆ:
ಕೊಲೆ ಮಾಡಿದ ನಂತರ ಪಾತಕಿಗಳು ಒಂದೇ ಬೈಕ್ ನಲ್ಲಿ ಎಸ್ಕೆಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ನೇಹಿತರ ನಡುವಿನ ವೈಷಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಈಗ ಪಾತಕಿಗಳಿಗೆ ಎಡೆಮುರಿ ಕಟ್ಟಲು ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು