February 21, 2026

Newsnap Kannada

The World at your finger tips!

c t ravi

ಕೆಟ್ಟಮೇಲೆ ಬುದ್ಧಿ ಬಂದಿದೆ – ಕಾಂಗ್ರೆಸ್ ಸಹವಾಸ ಬಿಡಿ; ಎಚ್ ಡಿಕೆಗೆ,ಸಿ.ಟಿ.ರವಿ ಟಾಂಗ್

Spread the love

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಕೆಟ್ಟಮೇಲೆ ಬುದ್ಧಿಬಂದಿದೆ.ಇನ್ಮೇಲಾದ್ರೂ ಕಾಂಗ್ರೆಸ್ ಸಹವಾಸ ಮಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಿವಿಮಾತು ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ,ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನವರ ವಾಗ್ಯದ್ದ ಗಳನ್ನು ಕೇಳಿದ್ದೇನೆ.‌ಡಾ. ಅಂಬೇಡ್ಕರ್ ಬಹು ಹಿಂದೆ ಹೇಳಿದ್ದರು. ಕಾಂಗ್ರೆಸ್ ಉರಿಯುವ ಮನೆಯಾಗಿದೆ ಎಂದು ಆ ಮಾತು ನಿತ್ಯ ಸತ್ಯ ಎಂದು ಮೊನಚಾಗಿ ಚುಚ್ಚಿದರು.

ಕಾಂಗ್ರೆಸ್ ಕುರಿತು ಕುಮಾರಸ್ವಾಮಿ ಚಂಚಲ ನಿಲುವು ಹೊಂದಿರಬಾರದು. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಂದಾಗಿ ನನಗೆ ಕೆಟ್ಟಹೆಸರು ಬರುವಂತಾಯಿತು ಎಂದು ಎಚ್‌ಡಿಕೆ ಕೊನೆಗೂ ನೋವು ತೊಡಿಕೊಂಡಿದ್ದಾ ರೆಂದು ಹೇಳಿದರು.

ಸಿದ್ದು ವೈಚಾರಿಕ ಕ್ರಾಸ್ ಬೀಡ್ :

ಸಿದ್ದರಾಮಯ್ಯನವರ ಕ್ರಾಸ್‌ಬೀಡ್ ವ್ಯಾಖ್ಯಾನ ಕುರಿತು ಮಾತನಾಡಿದ ರವಿ , ಡಿಎನ್‌ಎ – ಕ್ರಾಸ್‌ಬೀಡ್ ಬೇರೆ, ಬೇರೆ. ಐಡಿಯಾಲಜಿ ಕ್ರಾಸ್‌ಬೀಡ್ ಬೇರೆ. ವೈಚಾರಿಕ ಕ್ರಾಸ್ ಬೀಡ್ ಸಿದ್ದ ರಾಮಯ್ಯ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವಲ್ಲದೇ ಯಾರು ಜಾರಿ ತರುತ್ತಾರೆ? :

ಗೋಹತ್ಯೆ ನಿಷೇಧ ವಿಚಾರ ಪ್ರಸ್ತಾಪಿಸಿದ ಬಿಜೆಪಿ ನಾಯಕ, ಗೋಹತ್ಯೆ ನಿಷೇಧ ಕಾಯ್ದೆ ನಾವಲ್ಲದೆ ಇನ್ಯಾರು ಜಾರಿಗೊಳಿಸುತ್ತಾರೆ? ಎಂದು ಪ್ರಶ್ನಿಸಿ, ಮುಂದೆ ದೇಶದಲ್ಲಿ ಏಕರೂಪ
ನಾಗರಿಕ ಸಂಹಿತೆ( ಕಾಮನ್ ಸಿವಿಲ್ ಕೋಡ್) ಬಂದರೂ ಆಶ್ಚರ್ಯವಿಲ್ಲ ಎಂದರು.

ರೈತರ ಸಮಸ್ಯೆ ಕುರಿತಂತೆ ಮಾತನಾಡಿ, ಬಿಜೆಪಿ ಹಿಂದೆಯೂ ರೈತರ ಪರವಾಗಿತ್ತು, ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಿದರು.


error: Content is protected !!