ಮೈಸೂರಿನಲ್ಲಿ ಗಲಾಟೆ ನಡುವೆಯೂ ಪ್ರೀ ವೆಡ್ಡಿಂಗ್ ಶೂಟ್!

Team Newsnap
1 Min Read

ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ…..ಚಿಂತೆ ಎಂಬುದು ಚಾಲ್ತಿ ಮಾತೊಂದಿದೆ. ಈ ಮಾತಿಗೆ ಅನ್ವರ್ಥವಾಗಿ ಫ್ರೀ ವೆಡ್ಡಿಂಗ್ ಶೂಟ್ ಎಲ್ಲರ ಗಮನ ಸೆಳದಿದೆ.

ಅರಮನೆ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್ ಜೋರಾಗಿತ್ತು. ಪ್ರತಿಭಟನೆಗಳು ಅರಮನೆಯ ಮುಂಭಾಗದಲ್ಲಿ ನಡೆದಿದ್ದವು.
ಧಿಕ್ಕಾರಗಳು ಕಿವಿಗೆ ತಾಗಿದ್ದವು.

ರಾಜ್ಯದ ಭಾಷೆ, ನೆಲ , ಜಲ ಉಳುವಿಗೆ ಹಾಗೂ ಅನ್ಯ ಭಾಷಿಗರಿಗೆ ರಾಜ್ಯದ ನೆಲೆ ಇನ್ನಿಲ್ಲದ ಆದ್ಯತೆ ನೀಡುವ ಸರ್ಕಾರದ ಧೋರಣೆ ಧಿಕ್ಕರಿಸಿ ನಡೆದಿದ್ದ ಪ್ರತಿಭಟನೆ ಗಳ ನಡುವೆಯೇ ಪ್ರೀ ವೆಡ್ಡಿಂಗ್ ಶೂಟ್ ಸದ್ದಿಲ್ಲದೇ ಅರಮನೆ ಮುಂಭಾಗದಲ್ಲಿ ನಡೆದಿದ್ದಿತ್ತು,.

ಇತ್ತ ಹುಡುಗ – ಹುಡುಗಿ ಪ್ರತಿಭಟನೆಯ ಕಾವಿನ ಬಗ್ಗೆ ಯಾವುದೇ ಅರಿವಿಲ್ಲದೇ ಫೋಟೋ ಶೂಟ್ ನಲ್ಲಿ ತಲ್ಲೀನರಾಗಿದ್ದರು. ಕ್ಯಾಮರಾ ಮನ್ ಹೇಳಿದಂತೆ ಫೋಸ್ ಕೊಟ್ಟರು. ಗಲಾಟೆ ನಡುವೆ ಗುಡ್ ಸ್ನ್ಯಾಪ್ ಕ್ಲಿಕ್‌ ಮಾಡುವ ಹೊತ್ತಿಗೆ ಸಾಕು ಬೇಕಾಗಿ ಹೋಗಿತ್ತು.

Share This Article
Leave a comment