ರೋಹಿಣಿ ಸಿಂಧೂರಿ ನೇಮಕ : ಡಿ 11 ಕ್ಕೆ ಮತ್ತೆ ವಿಚಾರಣೆ- ಸಿಎಟಿ

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೇಮಕ ವಿವಾದ ಸಿಎಟಿ ನ್ಯಾಯಾಲಯ ದಲ್ಲಿ ವಿಚಾರಣೆ ಪದೇ ಪದೇ ಮುಂದೂಡುತ್ತಲೇ ಇದೆ.

ಶರತ್ ಅವರನ್ನು ಕೇವಲ 29 ದಿನಕ್ಕೆ ವರ್ಗಾವಣೆ ಮಾಡಿ, ರೋಹಿಣಿ ಡಿಸಿಯಾಗಿ ನೇಮಕ ಮಾಡಿದನ್ನು ಪ್ರಶ್ನೆ ಮಾಡಿ ಸಿಎಟಿಯಲ್ಲಿ ಹೂಡಿದ್ದ ವ್ಯಾಜ್ಯ ಡಿ 11 ಕ್ಕೆ ಮುಂದೂಡಿದೆ.

ರೋಹಿಣಿ ಸಿಂಧೂರಿ ಅವರಿಗೆ ಎಂದಿನಂತೆ ಬಿಗ್ ರಿಲೀಫ್ ಸಿಕ್ಕರೆ ಅಧಿಕಾರಿ ಶರತ್ ಗೆ ನ್ಯಾಯಾಲಯದ ಮೊರೆ ಹೋಗಿರುವುದೇ ಒಂದು ರೀತಿ ನುಂಗಲಾರದ ತುತ್ತಾಗಿದೆ.

ಎಸಿಟಿ ಶುಕ್ರವಾರ ವಿಚಾರಣೆ ಆರಂಭಿಸಿದ ಸಿಎಟಿ ಸರ್ಕಾರದ ಪರವಾಗಿ ವಾದ ಮಂಡನೆ ಆಲಿಸಿತು.ಆದರೆ ನಿರ್ಗಮಿತ ಡಿಸಿ ಶರತ್ ಪರ ವಕೀಲರು ವಾದ ಮಂಡಿಸಲು ಮುಂದಿನ ವಾರ ಅವಕಾಶ ಕಲ್ಪಿಸುವುದಾಗಿ ಹೇಳಿ ನ್ಯಾಯಾಧೀಶರು ಡಿಸೆಂಬರ್ 11 ಕ್ಕೆ ಮುಂದೂಡಿದರು.

ರಾಜ್ಯದಲ್ಲಿ ಗ್ರಾಪಂ ಚುನಾವಣೆ ಗಳ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 11 ರಂದು ಮತ್ತೆ ವಿಚಾರಣೆ ಈ ಕಾರಣಕ್ಕಾಗಿ ಮುಂದೂಡುವ ಸಾಧ್ಯತೆ ಇದೆ.
ರೋಹಿಣಿ ಅದೃಷ್ಟ ಚೆನ್ನಾಗಿ ಇರುವ ಹಿನ್ನೆಲೆಯಲ್ಲಿ ಪ್ರತಿ ಹೀಯರಿಂಗ್ ನಲ್ಲಿ ಒಂದೊಂದು ಅವಕಾಶ ಸಿಗುತ್ತಲೇ ಇದೆ.


ಗ್ರಾಮ ಪಂಚಾಯತ್ ಚುನಾವಣೆ ಕಾರಣಕ್ಕಾಗಿ ಸಧ್ಯಕ್ಕೆ ರೋಹಿಣಿ ಸಿಂಧೂರಿ ವರ್ಗಾವಣೆ ಸಾಧ್ಯ ಕಷ್ಟ ಸಾಧ್ಯ ಎಂದು ವಿಶ್ಲೇಷಣೆಯ ಮಾಡಲಾಗುತ್ತಿದೆ.

Share This Article
Leave a comment