January 28, 2026

Newsnap Kannada

The World at your finger tips!

sadam

ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ: ಸಿಲುಕಿದ್ದ ಕಾರ್ಮಿಕ ದುರ್ಮರಣ

Spread the love

ಮೈಸೂರು: ಶಿಥಿಲಗೊಂಡಿದ್ದ ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡದ ದುರಸ್ತಿ ಕಾಮಗಾರಿಯ ವೇಳೆ ಕಟ್ಟಡ ಕುಸಿದು ಬಿದ್ದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸದ್ದಾಂ ದುರ್ಮರಣಕ್ಕೀಡಾಗಿದ್ದಾರೆ.

80 ವರ್ಷಗಳ ಹಳೆಯ ಈ ಕಟ್ಟಡದ ದುರಸ್ತಿ ಕಾರ್ಯ ಕಳೆದ ತಿಂಗಳು ಆರಂಭವಾಗಿತ್ತು. ಮಂಗಳವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿಯುವುದರಿಂದ ಸದ್ದಾಂ ಅವಶೇಷಗಳಡಿ ಸಿಲುಕಿಕೊಂಡರು.

ಅವರನ್ನು ರಕ್ಷಿಸಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಆದರೆ, ಬುಧವಾರ ಬೆಳಗಿನ ಜಾವ ಅವಶೇಷಗಳಡಿಯಲ್ಲಿ ಸದ್ದಾಂ ಮೃತದೇಹ ಪತ್ತೆಯಾಯಿತು.ಇದನ್ನು ಓದಿ –ಪದ್ಮಭೂಷಣ ಪ್ರಶಸ್ತಿಗೆ ಪುರಸ್ಕೃತ ಕನ್ನಡ ನಟ ಶ್ರೀ ಅನಂತ ನಾಗ್

ಈ ಘಟನೆ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!