October 16, 2024

Newsnap Kannada

The World at your finger tips!

punith

ಮಂಡ್ಯದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ವಂಚನೆ

Spread the love

ಮಂಡ್ಯ: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಕ್ರೀಡಾಕೂಟ (ಅಯೋಜಿಸಲಾಗುವುದು ಎಂದು ಹೇಳಿ) ಜನರನ್ನು ವಂಚಿಸಿರುವ ಘಟನೆ ಮಳವಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ವಂಚನೆಯಲ್ಲಿ ತೊಡಗಿರುವ ಅಪರಿಚಿತ ವ್ಯಕ್ತಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಮಳವಳ್ಳಿಯ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಭರ್ಜರಿ ಬಹುಮಾನಗಳ ಘೋಷಣೆ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಸ್ಪರ್ಧೆಗೆ ಸಂಬಂಧಿಸಿದಂತೆ, ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ₹4 ಲಕ್ಷ, ತೃತೀಯ ₹3 ಲಕ್ಷ, ನಾಲ್ಕನೇ ₹2 ಲಕ್ಷ, ಮತ್ತು ಐದನೇ ಬಹುಮಾನ ₹1 ಲಕ್ಷ ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ₹10,000 ಪ್ರವೇಶ ಶುಲ್ಕ, ಮತ್ತು ಮುಂಗಡವಾಗಿ ₹3500 ಪಾವತಿಸಲು ಸೂಚನೆ ನೀಡಲಾಗಿತ್ತು. ಈ ಸ್ಪರ್ಧೆ ನವೆಂಬರ್ 20ರಂದು ಮಳವಳ್ಳಿಯಲ್ಲಿ ನಡೆಯಲಿದೆ ಎಂಬ ನಕಲಿ ಮಾಹಿತಿಯೊಂದಿಗೆ ಜನರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಅಪರಿಚಿತ ವ್ಯಕ್ತಿ ಅಪ್ಪು ಹೆಸರಿನಲ್ಲಿ ಜನರನ್ನು ಮೋಸಮಾಡುತ್ತಿದ್ದಾನೆ ಎಂಬ ಆಕ್ಷೇಪವಿದೆ.ದೋಸೆ ಪ್ರಿಯರಿಗೆ ಸಿಹಿ ಸುದ್ದಿ: ಶೀಘ್ರವೇ ಕೆಎಂಎಫ್ ನಿಂದ ‘ನಂದಿನಿ ದೋಸೆ ಹಿಟ್ಟು’ ಮಾರುಕಟ್ಟೆಗೆ

ಈ ಘಟನೆಗೆ ಸಂಬಂಧಿಸಿ ಮಳವಳ್ಳಿಯ ಪೊಲೀಸರಿಗೆ ದೂರು ನೀಡಿದ್ದು, ಜನರನ್ನು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!