March 12, 2026

Newsnap Kannada

The World at your finger tips!

President , I.N.D.I.A , congress

ಖರ್ಗೆ ಕುಟುಂಬಕ್ಕೆ ‘ED’ ಆತಂಕ: ಸಿದ್ದಾರ್ಥ್ ಟ್ರಸ್ಟ್ 5 ಎಕರೆ ಸೈಟ್ ಹಿಂತಿರುಗಿಸಲು ನಿರ್ಧಾರ!

Spread the love

ಬೆಂಗಳೂರು: ಮುಡಾದಲ್ಲಿ 14 ಸೈಟ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಿಂತಿರುಗಿಸಿದ್ದರೆ, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬವು ಸಂಬಂಧಿಸಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ 5 ಎಕರೆ ಸಿಎ ನಿವೇಶನವನ್ನು ವಾಪಸ್ ನೀಡಲು ತೀರ್ಮಾನಿಸಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಖರ್ಗೆ ಅವರ ಕುಟುಂಬದ ಟ್ರಸ್ಟ್‌ಗೆ ನೀಡಲಾಗಿದ್ದ ಸೈಟ್ ಹಿಂತಿರುಗಿಸುವ ನಿರ್ಧಾರ ಬಗ್ಗೆ ಸ್ಪಷ್ಟನೆ ನೀಡಿದರು. ಕೆಐಎಡಿಬಿ ಮೂಲಕ ಹಂಚಿಕೆ ಮಾಡಿದ್ದ ಭೂಮಿಯನ್ನು ವಾಪಸ್ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಈ ಸೈಟ್ ಹಂಚಿಕೆ ಕಾನೂನುಬಾಹಿರವಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು, ಆದರೆ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದರು.

“ನಮ್ಮ ಕುಟುಂಬದಲ್ಲಿ ಮೂವರು ಮಾತ್ರ ರಾಜಕೀಯದಲ್ಲಿ ಇದ್ದೇವೆ. ನನ್ನ ಅಣ್ಣ ಅವರು ಶಾಂತ ಸ್ವಭಾವದವರು, ಅವರ ಮೇಲೆ ನಡೆಯುತ್ತಿರುವ ರಾಜಕೀಯ ದಾಳಿಯಿಂದ ಕಷ್ಟಪಡುವಂತೆ ಕಂಡುಬರುತ್ತಿದೆ. ಹೀಗಾಗಿ, ಸೆಪ್ಟೆಂಬರ್ 29ರಂದು ಅವರು ಕೆಐಎಡಿಬಿಗೆ ಪತ್ರ ಬರೆದು, ಸೈಟ್ ಕಾನೂನಾತ್ಮಕವಾಗಿ ಹಿಂತಿರುಗಿಸುತ್ತೇವೆ ಎಂದು ತಿಳಿಸಿದ್ದಾರೆ,” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕಣಕ್ಕೆ? ಹೆಚ್‌ ಡಿ ಪುತ್ರನಿಗೆ ಹೊಸ ರಾಜಕೀಯ ಪಥ

ಸಿಎ ಸೈಟ್‌ ಅನ್ನು ತೆಗೆದುಕೊಳ್ಳುವ ಬಗ್ಗೆ ರಾಹುಲ್ ಖರ್ಗೇ ತೀರ್ಮಾನಿಸಿದ್ದರು, ಆದರೆ ಇದೀಗ ಅವರೇ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. “ರಾಜಕೀಯ ಆರೋಪಗಳಷ್ಟೇ ಇದಾಗಿದೆ,” ಎಂದೂ ಅವರು ಹೇಳಿದರು.

error: Content is protected !!