October 16, 2024

Newsnap Kannada

The World at your finger tips!

WhatsApp Image 2024 10 10 at 6.43.15 PM

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಮಂಡ್ಯದ ಮೆಕ್ಯಾನಿಕ್: ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಗೆಲುವು

Spread the love

ಮಂಡ್ಯ: ಪಾಂಡವಪುರದ ಮೆಕ್ಯಾನಿಕ್ ಅಲ್ತಾಫ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಘಟನೆ ನಡೆದಿದೆ. ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ.

ಪಾಂಡವಪುರ ನಿವಾಸಿ ಅಲ್ತಾಫ್, ವಯನಾಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕೇವಲ 250 ರೂ. ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಓಣಂ ಲಾಟರಿಗಾಗಿ ಸುಮಾರು 71 ಲಕ್ಷ ಜನರು ಟಿಕೆಟ್‌ ಖರೀದಿಸಿದ್ದರ ನಡುವೆ, ಅದೃಷ್ಟ ಅಲ್ತಾಫ್‌ ಅವರ ಮೊರೆ ಹೊತ್ತಿತ್ತು.

ಲಾಟರಿ ಫಲಿತಾಂಶ ಪ್ರಕಟವಾದ ನಂತರ, ಪಾಂಡವಪುರದ ಈ ಸಾಮಾನ್ಯ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಲ್ತಾಫ್‌ ಈಗ ಲಾಟರಿ ಹಣ ಪಡೆಯಲು ಕೇರಳಕ್ಕೆ ತೆರಳಿದ್ದು, ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ.ದರ್ಶನ್‌ , ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಪೂರ್ಣ- ಅ.14ರಂದು ಆದೇಶ ಪ್ರಕಟ

25 ಕೋಟಿ ರೂ. ಗೆದ್ದರೂ, ತೆರಿಗೆ ಮತ್ತು ಇತರ ಕಡಿತಗಳನ್ನು ಹೊರತುಪಡಿಸಿ, ಸುಮಾರು 13 ಕೋಟಿ ರೂ. ಹಣ ಪಡೆಯುವ ನಿರೀಕ್ಷೆಯಿದೆ.

Copyright © All rights reserved Newsnap | Newsever by AF themes.
error: Content is protected !!