March 11, 2026

Newsnap Kannada

The World at your finger tips!

WhatsApp Image 2023 07 01 at 7.32.16 PM

“ಸದ್ಗುರು”

Spread the love

ತ್ರಿಮೂರ್ತಿ ರೂಪನೆ ಗುರುವೆ,ಹೇ ವರಕಲ್ಪ ತರುವೆ!
ನಿನ ಪಾದ ಸೇವೆಯಲಿ,ಧನ್ಯಳು ನಾನಾಗುವೆ!
ವೈರಾಗ್ಯ ಸಾಮ್ಮಾಜ್ಯವ ಆಳುವಾ ಪ್ರಭುವೇ!
ಸಚ್ಚಿದಾನಂದ ಗುರುವೆ,
ನಿನ ಪಾದಕೆರಗುವೆ!

ಬ್ರಹ್ಮ ಗೀಚಿದಾ ಬರಹದ, ತಾಪಕೆ ತಂಪೆರೆಯುವೆ!
ಪಾಪ ಕರ್ಮದಾ ಫಲಕೆ, ಪರಿಹಾರ ಹುಡುಕುವೆ!
ಆಪತ್ತನು ಕಂಡೊಡನೆ,ಉಪಾಯವ ತೋರುವೆ!
ಗುರು ಸಾಕ್ಷಾತ್ ಪರಂಬ್ರಹ್ಮ! ನಿನ ಪಾದಕೆರಗುವೆ!

ಭವ ಭಾದೆಯ ನಾವೆಯ, ಸುಲಭದೆ ದಾಟಿಸುವೆ!
ಮೋಹ ಮಮಕಾರಗಳ,ಬಂಧವ ಸಡಿಲಿಸುವೆ!
ವಿರಾಗದ ಹಾದಿಯ ಸುಗಮವ ನೀ ಮಾಡುವೆ!
ಗುರು ಸಾಕ್ಷಾತ್ ಮಹಾವಿಷ್ಣುವೆ, ನಿನ ಪಾದಕೆರಗುವೆ!

ಒಡಲಿನ ಅರಿಗಳ ಬೆಂಕಿಗೆ, ಜಲ ನೀನಾಗಿರುವೆ!
ಉಡುಗಿಸಿ ಬೆಡಗಿನ ಬಾಳ್ವೆಯ, ಸರಳ ದಾರಿ ತೋರುವೆ!
ಹೀನ ಗುಣಗಳನ್ನೆಲ್ಲ ತರಿದು, ದೀನಳನ್ನ ಮಾಡುವೆ!
ಗುರು ಸಾಕ್ಷಾತ್ ಪರಮೇಶ್ವರ, ನಿನ ಪಾದಕೆರಗುವೆ!

roopa manjunath

ರೂಪ ಮಂಜುನಾಥ
ಹೊಳೆನರಸೀಪುರ

error: Content is protected !!