October 6, 2024

Newsnap Kannada

The World at your finger tips!

ameba

ಮೆದುಳು ತಿನ್ನುವ ಅಮೀಬಾಗೆ ನಾಲ್ಕು ಮಕ್ಕಳು ಬಲಿ

Spread the love

ಮಂಗಳೂರು: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಮೀಬಾ ಸೋಂಕು ಲಕ್ಷಣ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು ,ನೇಗ್ಲೇರಿಯಾ ಪೌಲೇರಿ ಹೆಸರಿನ ಅಪರೂಪ, ಅಪಾಯಕಾರಿ ಸೂಕ್ಷ್ಮಾಣು ಜೀವಿ ಮೆದುಳು ತಿನ್ನುವ ಅಮೀಬಾ ಆಗಿದೆ.

ಕಲುಷಿತ ನೀರಿನಲ್ಲಿ ಈಜುವಾಗ ಈ ಸೋಂಕು ಹರಡುವ ಸಾಧ್ಯತೆ ಇದ್ದು , ಈ ಅಮೀಬಾ ಮೂಗಿನ ಮೂಲಕ ನಮ್ಮ ಶರೀರ ಸೇರುತ್ತದೆ.ರಾಜ್ಯದಲ್ಲಿ 8 IAS ಅಧಿಕಾರಿಗಳ ವರ್ಗಾವಣೆ

ಈ ಅಮೀಬಾ ಪರಾವಲಂಬಿಯಲ್ಲದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ,ಮೆದುಳಿನ ಅಂಗಾಂಕ್ಕೆ ಭಾರಿ ಹಾನಿ ಉಂಟುಮಾಡುವ ಸೂಕ್ಷ್ಮಾಣು ಜೀವಿ.

ಆರೊಗ್ಯ ಇಲಾಖೆ ಕಲುಷಿತ ನೀರಿನ ಹೊಂಡಗಳಲ್ಲಿ ಈಜಾಡದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!