ಪಿರಿಯಾಪಟ್ಟಣ :
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾವಂದೂರು ಸಮೀಪದ ನಂದೀಪುರ ಗ್ರಾಮದಲ್ಲಿ ಜರುಗಿದೆ.
ನಂದಿಪುರ ಗ್ರಾಮದ ಹಾಲಯ್ಯನ ಎರಡನೇ ಮಗಳು ರೂಪ (26) ಆತ್ಮಹತ್ಯೆಗೆ ಶರಣಾಗಿದ್ದಾಳೆ, ಈ ಸಂಬಂಧ ಬೆಟ್ಟದ ಪುರ ಠಾಣೆಯಲ್ಲಿ ಹಾಲಯ್ಯ ದೂರು ನೀಡಿದ್ದಾರೆ.
ನನಗೆ 4 ಮಕ್ಕಳಿದ್ದು ಎರಡನೇ ಮಗಳು ರೂಪಳಿಗೆ ಕೆಲ ತಿಂಗಳ ಹಿಂದೆ ದಿಲೀಪ ಬಿನ್ ಶಿವಯ್ಯ ಕೊಣಸೂರು ನಿವಾಸಿ ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ರೂಪಾಳು ಎಂ.ಎ, ಬಿ.ಎಡ್ ವಿದ್ಯಾಭ್ಯಾಸ ಮಾಡಿದ್ದು, ರಾವಂದೂರು ಗ್ರಾಮದ ಕೆ,ಪಿ,ಎಸ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.
ನಮ್ಮ ಪಕ್ಕದಮನೆಯವನೇ ಆದ ಕಾರ್ತಿಕ್ ಎಂ.ಕೆ ಎಂಬುವವನು ರೂಪಾಳನ್ನು ಪ್ರೀತಿಸುವಂತೆ ಆಗಾಗ್ಗ ಪೀಡಿಸುತಿದ್ದನು.
ಡಿ.24 ಮದ್ಯಾಹ್ನ 1:30 ರ ಸಮಯದಲ್ಲಿ ನಾನು ಮತ್ತು ನನ್ನ ಮೊದಲನೇ ಮಗಳು ರೇಖಾಳ ಕೂಡಿ ಆಡು ಮೇಯಿಸಲೆಂದು ಜಮೀನಿಗೆ ತೆರಳಿದುವು, ಎಂದಿನಂತೆ ಲವಲವಿಕೆ ಯಿಂದ ಇದ್ದ ರೂಪ ಸಂಜೆ 4 ಗಂಟೆಯ ಸಮಯದಲ್ಲಿ ಅಡುಗೆ ಮನೆ ಹಿಂಭಾಗ ಒಪ್ಪರಾದ ಮರದ ತೊಲೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ