ಯೋಗೇಶ್ ಗೌಡ ಪ್ರಕರಣ ತನಿಖೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಯೋಗೇಶ್ ಪತ್ನಿ ಮಲ್ಲಮ್ಮ ಕೇಸ್ ಮುಚ್ಚಿ ಹಾಕಲು 1 ಕೋಟಿ 60 ಲಕ್ಷ ರು ಡೀಲ್ ಆಗಿದ್ದಳು ಎಂಬ ಅಂಶವನ್ನು ಸಿಬಿಐ ಬಯಲು ಮಾಡಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮಲ್ಲಮ್ಮ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ವಿನಯ ಕುಲಕರ್ಣಿ ಆಪ್ತ ರಾಗಿದ್ದ ನಾಗರಾಜ್ ಗೌರಿ ಮತ್ತು ಮುತ್ತಗಿ ಎಂಬುವರರ ಮೂಲಕ ಮಲ್ಲಮ್ಮನಿಗೆ ಡೀಲ್ ಮಾಡಲಾಗಿತ್ತು. ಇದರ ಮೊದಲ ಕಂತಾಗಿ 60 ಲಕ್ಷ ರು ಗಳನ್ನು ಆಕೆಗೆ ಸಂದಾಯ ಮಾಡಲಾಗಿತ್ತು ಎಂದು ಹೇಳಲಾಗಿದೆ. ಹೆಂಡತಿಗೆ ದುಡ್ಡು ಕೊಟ್ಟು ಕೊಲೆ ಪ್ರಕರಣವನ್ನು ವಿನಯ್ ಕುಲಕರ್ಣಿ ಮುಚ್ಚಿ ಹಾಕುವ ತಂತ್ರ ಮಾಡಿದ್ದರು ಎಂಬ ಅಂಶವೂ ಬಯಲಾಗಿದೆ.
ಸಿಬಿಐ ಈಗಾಗಲೇ ನಾಗರಾಜ್ ಗೌರಿ ಮತ್ತು ಮುತ್ತಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಸಂಗತಿಯನ್ನು ಹೊರ ತಂದಿದೆ ಎಂದು ಗೊತ್ತಾಗಿದೆ.
ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ನನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಸಿ ಕೊಂಡಿದ್ದರು . ಇದು ಸ್ಥಳೀಯ ಕಾಂಗ್ರೆಸ್ ನಾಯಕರು ಮಲ್ಲಮ್ಮನ ಸೇರ್ಪಡೆ ಗೆ ಭಾರಿ ವಿರೋಧವಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ