ಉಪ ಚುಣಾವಣೆಗಳ ಫಲಿತಾಂಶ ಭವಿಷ್ಯದ ಮಾನದಂಡವಲ್ಲ. ಜನತಾ ಜನಾರ್ಧನ ಎಂಬಂತೆ ಜನತೆಯ ತೀರ್ಪಿಗೆ ನಾನು ತಲೆ ಬಾಗಿದ್ದೇನೆ’ ಎಂದು ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಂದು ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುಣಾವಣೆಯಲ್ಲಿ ಜೆಡಿಎಸ್ ತೀವ್ರ ಮುಖಭಂಗವನ್ನು ಅನುಭವಿಸಿದೆ. ಈ ಹಿನ್ನಲೆಯಲ್ಲಿ ಟ್ವಿಟರ್ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಹೆಚ್ಡಿಕೆ ‘ಬಿಜೆಪಿ ಪಕ್ಷ ಕಳೆದ 15 ತಿಂಗಳಲ್ಲಿ ಜನತೆಗೆ ತೋರಿದ ಕಾಳಜಿಯ ಆಧಾರದ ಮೇಲೆ ಉಪ ಚುಣಾವಣೆ ಬಿಜೆಪಿಗೆ ಗೆಲುವನ್ನು ನೀಡಿರಬಹುದು. ಆದರೆ ಉಪ ಚುಣಾವಣೆ ಮಾತ್ರವೇ ಭವಿಷ್ಯದ ಗೆಲುವಿನ ಮಾನದಂಡವಲ್ಲ’ ಎಂದು ಹೇಳಿದ್ದರು.
ಉಪಚುಣಾವಣೆಯ ಫಲಿತಾಂಶದಿಂದ ನಾವು ಧೃತಿಗೆಡುವ ಅಗತ್ಯವಿಲ್ಲ. ಈ ಹಿಂದೆ ಕೇವಲ ಎರಡು ಸೀಟುಗಳನ್ನು ಗೆದ್ದ ಪಕ್ಷದ ಮುಖಂಡರನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಿಯನ್ನಾಗಿ ಮಾಡಿದ್ದರು’ ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.