ಸಾಂಸ್ಕೃತಿಕ ನಗರಿ ಮೈಸೂರಿನ ಸುಬ್ಬರಾಯನ ಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ನಡೆದಿದೆ.
ದಂಡಿ ಯಾತ್ರೆಯ ಪ್ರತಿಕೃತಿಯಾಗಿರುವ ಈ ಪ್ರತಿಮೆಯಲ್ಲಿ ಗಾಂಧಿಯವರ ಕೈಯಲ್ಲಿನ ಕೋಲು ಹಾಗೂ ಎಡಗೈ ಭಗ್ನಗೊಂಡಿವೆ. ಈ ಘಟನೆಯನ್ನು ವಿರೋಧಿಸಿರುವ ಸ್ಥಳೀಯ ನಾಗರೀಕರು ಉದ್ಯಾನವನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಮಾದಕ ವ್ಯಸನಿಗಳು ಈ ಕೃತ್ಯವನ್ನು ನಡೆಸಿರಬಹುದೆಂದು ಸ್ಥಳೀಯರು ಆರೋಪಿಸಿದ್ದಾರೆ. ತನಿಖೆಯ ನಂತರವೇ ಯಾರು ಈ ದುಷ್ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿಯಲಿದೆ.