ಹೆಂಡತಿಯೊಂದಿಗೆ ಸ್ವಾಮೀಜಿ ಸಂಬಂಧ : ಗಂಡ ಕುಡುಕ – ಹಣದಾಹಿ : ಸುಳ್ಳು ಆರೋಪ – ಪತ್ನಿ

Team Newsnap
1 Min Read

ದಾವಣಗೆರೆ ಜಿಲ್ಲೆಯ ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿಗಳ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿಬಂದಿದೆ.

ಚಂದ್ರಶೇಖರ್ ಎಂಬುವವರು ನನ್ನ ಪತ್ನಿಯನ್ನು ಸ್ವಾಮೀಜಿಗಳು ಕಳೆದ ಒಂದೂವರೆ ವರ್ಷಗಳಿಂದ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ವಿರುದ್ಧದ ಆರೋಪದ ಬಗ್ಗೆ ಚಂದ್ರಶೇಖರ್​ ಪತ್ನಿ ಸ್ಪಷ್ಟನೆ ನೀಡಿ, ನನ್ನ ಪತಿ (ಚಂದ್ರಶೇಖರ್) ಕುಡಿತದ ಚಟ ಬಿಡಲಿ ಅಂತ ಸ್ವಾಮೀಜಿ ಬಳಿ ಕರೆದೊಯ್ದಿದ್ದೆ. ಕುಡಿತದ ಚಟ, ಡ್ರಗ್ಸ್​​ಗೆ ಅಡಿಕ್ಟ್​​​​ ಆಗಿದ್ದ ಪತಿ ಕಿರುಕುಳ ಕೊಡುತ್ತಿದ್ದರು

ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿಸಿ ಕುಡಿತ ಬಿಡಲು ಹೇಳಿದ್ದರು ನಾನು ಅವರ ಹತ್ತಿರ ಪೂಜೆ ಮಾಡಿಸಲು ಹೋಗ್ತಿದ್ದೆ. ಇದನ್ನು ನೆಪವಾಗಿಸಿ ಅವರ ವಿರುದ್ಧ ಆರೋಪ ಮಾಡಿದ್ದಾನೆ. ಮಂಡ್ಯ ಮೂಡಾದ 5 ಕೋಟಿ ರು ಹಗರಣ : ತೀರ್ಪಿನಲ್ಲಿ ಐವರ ಹೆಸರು ಬಹಿರಂಗ : ಮೋಸ ಮಾಡಿದ್ದು ಹೇಗೆ ?

ಸ್ವಾಮೀಜಿಯಿಂದ 30 ಲಕ್ಷ ರು ಕೊಡಿಸುವಂತೆ ಡಿಮ್ಯಾಂಡ್ ಮಾಡಿದ್ದ. ಆತನಿಗೆ ಹಣ ನೀಡದೆ ಇರೋದ್ದಕ್ಕೆ ಸುಳ್ಳು ಆರೋಪ ಮಾಡ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾಳೆ. ಅಲ್ಲದೇ ಶಿವಮೊಗ್ಗ ವಿದ್ಯಾನಗರ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದಾಳೆ.

Share This Article
Leave a comment