ತನ್ನ ಮೈಮೇಲೆ ಯಾವಾಗಲೂ ಚಿನ್ನ ಹಾಕ್ಕೊಂಡ್ ಚೀಟಿ ಬ್ಯುಸಿನೆಸ್ ಮಾಡುತ್ತಿದ್ದ ಬೆಂಗಳೂರಿನ ಆರ್.ಟಿ. ನಗರದ ಉಮೇಶ್, ನಾಮ ಹಾಕಿರೋದು ಒಬ್ಬಿಬ್ಬರಿಗಲ್ಲ. ಬರೋಬ್ಬರಿ 250ಕ್ಕೂ ಹೆಚ್ಚು ಜನರಿಗೆ 20 ಕೋಟಿರು ಮೋಸ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ.
ಈತ ನಡೆಸುತ್ತಿದ್ದ ವ್ಯವಹಾರದ ಕಳ್ಳಾಟ ಎಂಥವರಿಗೂ ಶಾಕ್ ಆಗುತ್ತೆ.
ಗ್ರಾಹಕರಿಂದ 10 ದಿನಕ್ಕೆ 10 ಸಾವಿರ ಚೀಟಿ ಹಾಕಿಸುತ್ತಿದ್ದ. ಆದರೆ ತನಗೆ ಬೇಕಾದವರಿಗೆ ಮಾತ್ರ ಚೀಟಿ ಕೂಗಲು ಅನುಕೂಲ ಮಾಡಿಕೊಟ್ಟು ಅರ್ಧಕ್ಕರ್ಧ ದುಡ್ಡು ಲಪಟಾಯಿಸುತ್ತಿದ್ದ.
ಈತನ ನಯವಂಚನೆ ಗೊತ್ತಾಗುತ್ತಿದ್ದಂತೆ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದರು ಇದೀಗ ನಮ್ಮ ಹಣ ಬರುತ್ತೊ ಇಲ್ಲವೋ ಕಂಗಾಲಾಗಿದ್ದಾರೆ ಪೋಲಿಸರಿಗೆ ದೂರು ನೀಡಿದ್ದಾರೆ
ಆರ್ ಟಿ ನಗರ ಪೋಲಿಸರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಡಗಿ ಕುಳಿತ್ತಿದ್ದ ಉಮೇಶ್ ಎಳೆದು ತಂದು ವಿಚಾರಣೆ ಮಾಡುತ್ತಿದ್ದಾರೆ .
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ