‘ಆ ಕೊನೆಯ ಕರೆ’ ಉಡುಪಿ ರಕ್ಷಿತಾ ಸಾವಿಗೆ ಕಾರಣ – ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Team Newsnap
1 Min Read

ಆಕೆ ಕೊನೆಯ ಫೋನ್ ಕಾಲ್ ಮಾಡಿದ ನಂತರ ಉಡುಪಿ ಯುವತಿ‌ ರಕ್ಷಿತಾ ನಾಯಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕಳೆದ ಶನಿವಾರ ಉಡುಪಿ ವಿದ್ಯಾರ್ಥಿನಿ ರಕ್ಷಿತಾ ನಿಗೂಢವಾಗಿ ಸಾವನ್ನಪ್ಪಿದ್ದಳು. ಅರೆ ಪ್ರಜ್ಞಾವಸ್ಥೆ ಸಾವಿನ ಪ್ರಕರಣದ ಜಾಡು ಹಿಡಿದ ಪೋಲೀಸರು ರಕ್ಷಿತಾ ನಾಯಕ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಆಕೆ ಮಾಡಿದ್ದ ಲಾಸ್ಟ್ ಕಾಲ್ ಆಧಾರದ ಮೇಲೆ ಸಾವಿನ ರಹಸ್ಯವನ್ನು ಬೇಧಿಸಿದ್ದಾರೆ. ಈ ಬೆನ್ನಲ್ಲೇ ಪ್ರಶಾಂತ್ ಕುಂದರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಗೆ ಈಗಾಗಲೇ ಮದುವೆಯಾಗಿದೆ. ಆದರೆ ಸಾಮಾಜಿಕ ಜಾಲತಾಣದ ಮೂಲಕ ಪ್ರಶಾಂತ್ ಹಾಗೂ ರಕ್ಷಿತಾ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ರಕ್ಷಿತಾ ನಾಯಕ್ ಳನ್ನು ಉಡುಪಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದೇ ಪ್ರಶಾಂತ್ ಇರಿಸಿದ್ದ. ರಕ್ಷಿತಾ ಪತ್ನಿಯನ್ನು ಬಿಟ್ಟು ತನ್ನೊಂದಿಗೆ ಇರುವಂತೆ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಪ್ರಶಾಂತ್ ಒಪ್ಪಿರಲಿಲ್ಲ. ರಕ್ಷಿತಾ ತನ್ನ ಕೊನೆಯ ಕರೆಯಲ್ಲಿಯೂ ಇದೇ ವಿಚಾರವನ್ನೇ ಹೇಳಿದ್ದಳು ಎಂದು ಪ್ರಶಾಂತ್ ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ರಕ್ಷಿತಾ ಸಾವಿಗೆ ಸಂಬಂಧಿಸಿದಂತೆ ಪೋಲೀಸರು ಪ್ರಶಾಂತ್ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ರಕ್ಷಿತಾ ಸಾವಿನ ಬೆನ್ನಲ್ಲೇ ಹಲವು ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪೋಲೀಸರ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರಲು ಸಾಧ್ಯ.

Share This Article
Leave a comment