ಬೆಂಗಳೂರಿನ ಪಟ್ಟಣಗೆರೆಯಲ್ಲಿ ನಟ ಸತೀಶ್ ವಜ್ರ ಎಂಬಾತನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಿದಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಇದನ್ನು ಓದಿ –ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು: ಜೂನ್ 24 ರಂದು ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ
ಬೆಸಗರಹಳ್ಳಿ ಗವಿಸಿದ್ದನ ಮಗ ಸುದರ್ಶನ್ (22) ಹಾಗೂ ಕುಮಾರ್ ಮಗ ನಾಗೇಂದ್ರ (19) ಎಂಬುವವರನ್ನು ಬಂಧಿಸಲಾಗಿದೆ
ಕಳೆದ ರಾತ್ರಿ ಇವರಿಬ್ಬರು ನಟ ಸತೀಶ್ ವಾಸಿಸುತ್ತಿದ್ದ ಮನೆಗೆ ಹೋಗಿರುವ ದೃಷ್ಯದ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ
ಸತೀಶ್ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಾವಿಗೆ ನಟ ಸತೀಶ್ ವಜ್ರನೇ ಕಾರಣ ಎಂದು ಆಕೆಯ ಸಹೋದರನೇ ಗೆಳೆಯನ ಸಹಾಯದಿಂದ ಈ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.