ಹಲಗೂರು ಸಮೀಪದ ಲಂಬಾಣಿ ಹೊಸದೊಡ್ಡಿ ಹಾಗೂ ಕೃಷ್ಣೇ ಗೌಡನ ದೊಡ್ಡಿ ಮಾರ್ಗ ಮಧ್ಯೆ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಜರುಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದ ವೀರಭದ್ರ ಗೌಡರ ಪತ್ನಿ ನಾಗಮ್ಮ (45) ಎಂಬುವವರು ಮೃತ ಪಟ್ಟ ದುರ್ದೈವಿ.
ಕಾರಿನಲ್ಲಿದ್ದ ಕನಕಪುರ ತಾಲ್ಲೂಕು ಮಲ್ಲಪುರ ಗ್ರಾಮದ ಕುಮಾರ್(27),ಸುಮಿತ್ರ (37), ಸುಜಾತ (30),ಪುಷ್ಪ(25),ಪೂಜಾ(18), ಕೆಂಪಮ್ಮ(47) ಇಬ್ಬರು ಮಕ್ಕಳಾದ ನಕ್ಷತ್ರ(02) ,ಆಯುಷ್,(04) ಗಂಭೀರ ಗಾಯಗೊಂಡವರನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ
ಸಮೀಪದ ಮುತ್ತತ್ತಿಯಲ್ಲಿ ಬೀಗರ ಔತಣಕೂಟ ಮುಗಿಸಿ ವಾಪಸ್ಸು ಲಂಬಾಣಿ ಹೊಸ ದೊಡ್ಡಿ ಮತ್ತು ಕೃಷ್ಣೇಗೌಡನ ದೊಡ್ಡಿಯ ಮಾರ್ಗ ಮಧ್ಯೆ ಕಾರಿನ ಹಿಂಭಾಗದ ಚಕ್ರ ಸಿಡಿದು ಈ ಘಟನೆ ಸಂಭವಿಸಿದೆ .
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು
- ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು
- ಪ್ರೀತಿಯೆಂದರೆ…. ಇಷ್ಟೇನಾ
- ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್ಐಟಿ
- ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ