KAS ಅಧಿಕಾರಿ ರಂಗನಾಥ್ ನಿವಾಸ ಸೇರಿ 5 ಕಡೆ ಎಸಿಬಿ ದಾಳಿ

Team Newsnap
0 Min Read

ರಾಜ್ಯದ KAS ಅಧಿಕಾರಿ ರಂಗನಾಥ್ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಂಗನಾಥ್ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.

40ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದಾರೆ.

ನ್ಯಾಯಾಂಗ ಬಡವಾಣೆಯ ನಿವಾಸ, ದೊಡ್ಡಬಳ್ಳಾಪುರದ ವಾಸದ ಮನೆ, ದೊಡ್ಡಬಳ್ಳಾಪುರ ಕನಕ ಟ್ರಸ್ಟ್ ಹಾಗೂ ಅವರ ಅಕ್ಷರ ಪಬ್ಲಿಕ್ ಶಾಲೆ ಹಾಗೂ ನಾಗರಬಾವಿಯ ಸಂಬಂಧಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

Share This Article
Leave a comment