ಸರ್ಕಾರಿ ನೌಕರನಿಗೆ ಅಶ್ಲೀಲ ವಿಡಿಯೋ ಇದೆ ಅಂತಾ ಬ್ಲಾಕ್ಮೇಲ್ ಮಾಡಿದ ಆರೋಪ ಮೇಲೆ ಮೂವರು ಆರೋಪಿಗಳನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಗಣಪತಿ ನಾಯಕ್, ಕಿಶನ್ ಮತ್ತು ಕೇಶವನ್ ಬಂಧಿತ ಅರೋಪಿಗಳು. ಈ ಪ್ರಕರಣದ ರುವಾರಿ ಯುವತಿ ಪರಾರಿಯಾಗಿದ್ದಾಳೆ
ಕೋಲಾರದಲ್ಲಿ ಕೆಲಸ ಮಾಡುವ ಶಿರಸ್ತೆದಾರ ಜೊತೆಗೆ ಯುವತಿ ಓರ್ವಳ ಪರಿಚಯ ಆಗಿತ್ತು. ಬಳಿಕ ಇಬ್ಬರು ಸಾಕಷ್ಟು ಸಲುಗೆಯಿಂದ ಇದ್ದರು . ಈ ವೇಳೆ ಯುವತಿ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.
ನಂತರ ವಿಡಿಯೋ ತುಣುಕನ್ನು ಯುವತಿ ಕಿಶನ್ಗೆ ನೀಡಿದ್ದಳು. ಬಳಿಕ ನೌಕರನಿಗೆ ವಿಡಿಯೋ ವಾಟ್ಸಪ್ ಮಾಡಿ ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆತಂಕಗೊಂಡ ನೌಕರ ಕೆ.ಆರ್ ಪುರ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಈ ದೂರಿನನ್ವಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಲಾಯರ್ ಜಗದೀಶ್ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಅಂತಾ ಹೇಳಲಾಗಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ಇನ್ನೂ ಪತ್ತೆಯಾಗಿಲ್ಲ.
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ