ನಾಗಚೈತನ್ಯ – ಸಮಂತಾ ದೂರವಾಗಿ ಹಲವು ತಿಂಗಳುಗಳೇ ಉರುಳಿವೆ. ಇಬ್ಬರೂ ತಮ್ಮ ಪಾಡಿಗೆ ತಾವುಗಳು ಬ್ಯುಸಿಯಾಗಿದ್ದಾರೆ. ಆದರೆ, ದಾಂಪತ್ಯದ ಹೊಸ ಹೊಸ ಮುಖಗಳು ಮಾತ್ರ ಅನಾವರಣಗೊಳ್ಳುತ್ತಲೇ ಇವೆ.
ಸಮಂತಾ ಬಗ್ಗೆ ನಾಗಚೈತನ್ಯ ಅಭಿಮಾನಿಗಳು ಸಲ್ಲದ ಆರೋಪ ಮಾಡಿದರು. ಅವರು ಯಾವುದೇ ಸಿನಿಮಾ ಒಪ್ಪಿಕೊಂಡರೂ, ಅದಕ್ಕೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದರು.
ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದಾಗಲಂತೂ ಮಾನಹಾನಿ ಆಗುವಂತಹ ಸಂದೇಶಗಳನ್ನು ಕಳುಹಿಸಿದರು. ಇದೀಗ ಮದ್ವೆ ಸೀರೆ ಸುದ್ದಿ ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ.
ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಸಾಯುವತನಕ ಜೊತೆ ಇರುವುದಾಗಿ ಪ್ರಮಾಣ ಮಾಡಿದ ಪತಿಯನ್ನೇ ಬಿಟ್ಟು ಬಂದಿದ್ದೇನೆ. ಇನ್ನು ಅವರು ಕೊಟ್ಟಿರುವ ಮದುವೆ ಸೀರೆ ಸೇರಿದಂತೆ ಇತರವಸ್ತುಗಳು ಯಾವ ಲೆಕ್ಕ ಎನ್ನುವ ಧೋರಣೆಯಿಂದಲೇ ಸಮಂತಾ ಎಲ್ಲವನ್ನೂ ವಾಪಸ್ಸು ಕೊಟ್ಟಿದ್ದಾರಂತೆ.