ತಾಯ್ನನಾಡಿಗೆ ಮರಳದೇ ಉಕ್ರೇನ್​ಗಾಗಿ ಗನ್ ಹಿಡಿದು ಸೈನ್ಯ ಸೇರಿದ ತಮಿಳುನಾಡಿನ ಯುವಕ!

Team Newsnap
1 Min Read

ರಷ್ಯಾ- ಉಕ್ರೇನ್ ನಡುವೆ ಭೀಕರ ಯುದ್ಧದ ಪರಿಣಾಮ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದರೆ 21 ವರ್ಷದ ಭಾರತೀಯ (ತಮಿಳುನಾಡಿನ) ವಿದ್ಯಾರ್ಥಿ ಉಕ್ರೇನ್ ಸೇನೆಗೆ ಸೇರಿದ್ದಾನೆ

ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯ 21 ವರ್ಷದ ಯುವಕ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಸೇನೆ ಸೇರಿದ್ದಾನೆಂಬ ಸುದ್ದಿ ಬಂದಿದೆ

ಉಕ್ರೇನ್​ ಪ್ಯಾರಾ ಮಿಲಿಟರಿಗೆ ಸೇರಿ ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದಾನೆ ಎನ್ನಲಾಗಿದೆ.

ಉಕ್ರೇನ್ ಬಿಕ್ಕಟ್ಟು ಬೆನ್ನಲ್ಲೇ ಅಧಿಕಾರಿಗಳು ತಮಿಳುನಾಡಿನಲ್ಲಿರುವ ಸೈನಿಕೇಶ್ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಪೋಷಕರನ್ನು ವಿಚಾರಿಸಿದ್ದಾರೆ. ಆಗ ಸೈನಿಕೇಶ್ ಭಾರತೀಯ ಆರ್ಮಿಗೆ ಸೇರಲು ಅರ್ಜಿ ಸಲ್ಲಿಸಿದ್ದರು. ಆದರೆ  ಕಾರಣಾಂತರಗಳಿಂದ ಅದು ರಿಜೆಕ್ಟ್ ಆಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

2018ರಲ್ಲಿ ಸೈನಿಕೇಶ್ ಉಕ್ರೇನ್​ಗೆ ವಿದ್ಯಾಭ್ಯಾಸಕ್ಕೆ ಹೋಗಿದ್ದ. ಖಾರ್ಕಿವ್​ನ ನ್ಯಾಷನಲ್ ಏರೋಸ್ಪೇಸ್ ವಿವಿಯಲ್ಲಿ ಓದಲು ಉಕ್ರೇನ್​ಗೆ ತೆರಳಿದ್ದ. ಅದರಂತೆ 2022ರಲ್ಲಿ ತಮ್ಮ ಕೋರ್ಸ್​ ಅನ್ನ ಸೈನಿಕೇಶ್ ಮುಗಿಸಿದ್ದಾನೆ.

ಈ ನಡುವೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿತು. ಪರಿಣಾಮ ಅವರ ಕುಟುಂಬ ಸೈನಿಕೇಶ್ ಸಂಪರ್ಕವನ್ನ ಕಳೆದುಕೊಂಡಿತು. ಹೀಗಾಗಿ ಅವರು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿದರು.

ನಂತರ ಸೈನಿಕೇಶ್ ಅವರನ್ನ ಸಂಪರ್ಕಿಸಲು ಸಾಧ್ಯವಾಗಿದೆ. ಈ ವೇಳೆ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಸೇರಿಕೊಂಡಿರುವ ಮಾಹಿತಿಯನ್ನು ಕುಟುಂಬಕ್ಕೆ ತಿಳಿಸಿದ್ದಾನೆ.

Share This Article
Leave a comment