ಶಿವಸೇನೆ ಕಾರ್ಯಕತ೯ರಿಂದ ಮತ್ತೆ ಪುಂಡಾಟ: ಸಚಿವೆ ಜೊಲ್ಲೆ ಒಡೆತನದ ಕಟ್ಟಡದ ಮೇಲೆ ದಾಳಿ

Team Newsnap
1 Min Read
ಮುಜರಾಯಿ ಖಾತೆಯ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಕೊಲ್ಲಾಪುರ ನಗರದ ಶಾಹುನಾಕಾ ಬಳಿ ನಿರ್ಮಾಣ ಹಂತದ ಕಟ್ಟಡದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಈ ವೇಳೆ ಕಾಮಗಾರಿ ತಡೆಹಿಡಿದು ಗಲಾಟೆ ಮಾಡಿ ಕಾರ್ಮಿಕರಿಗೆ ಬೆದರಿಕೆ ಹಾಕಿ ಕೆಲಸ ಆರಂಭಿಸದಂತೆ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ನಮ್ಮವರನ್ನು ಬಂಧನದಿಂದ ಬಿಡಿಸುವವರೆಗೂ ನಾವು ನಿಮ್ಮ ಕಟ್ಟಡಕ್ಕೆ ಅವಕಾಶ ನೀಡೋದಿಲ್ಲ. ಯಾವ ಸಚಿವರಿದ್ದರೆ ನಮಗೇನು? ನಮ್ಮಲ್ಲಿ ಬಂದು ಕ್ಷಮೆ ಕೇಳಬೇಕು ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕಾಮಗಾರಿ ಆರಂಭಿಸಬಾರದು ಎಂದು ಪುಂಡರು ಎಚ್ಚರಿಕೆ ನೀಡಿದ್ದಾರೆ.

Share This Article
Leave a comment