ನ್ಯಾಮತಿ ಬಳಿ ದುರಂತ -ಸ್ವಿಪ್ಟ್ ಕಾರಿಗೆ ಗುದ್ದಿದ ಸಾರಿಗೆ ಬಸ್ : ನಾಲ್ವರ ಸಾವು

Team Newsnap
1 Min Read

ಕೆಎಸ್ಆರ್​ಟಿಸಿ ಬಸ್​ ಮತ್ತು ಸ್ವಿಫ್ಟ್​ ಕಾರ್​ ನಡುವೆ ಸಂಭವಿಸಿದ ಭೀಕರ ಅಪಘಾತವಾಗಿ ನಾಲ್ವರು ಸಾವನ್ನಪ್ಪಿದ್ದಾರೆ

ಈ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಬಳಿ ನಡೆದಿದೆ.

ದ್ರಾಕ್ಷಾಯಣಿ, ಸುಮ, ಶಾರದಮ್ಮ ,ಚಾಲಕ ಸುನೀಲ್ ಮೃತರು

ತಾಲೂಕಿನ ಹಳೇಜೋಗ ಗ್ರಾಮದಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ.

ಸಾವನ್ನಪ್ಪಿದವರು ಭದ್ರಾವತಿ ಎಡೇಹಳ್ಳಿ ಗ್ರಾಮದವರು
ಹಳೇಜೋಗ ಗ್ರಾಮದಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸುತ್ತಿದ್ದರು.

ಈ ವೇಳೆ ಕಾರ್​ನಲ್ಲಿ ಹೊರಟಿದ್ದಾಗ ಹಿಂಬದಿಯಿಂದ ಬಂದ ಬಸ್​ ಕಾರ್​ಗೆ ಗುದ್ದಿದೆ. ಪರಿಣಾಮ ಕಾರ್​ನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದ್ರಾಕ್ಷಾಯಣಿ, ಸುಮ, ಶಾರದಮ್ಮ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸುನೀಲ್​​ರನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ನ್ಯಾಮತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a comment