ರಕ್ಷಣಾ ಇಲಾಖೆಯ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಇತರ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಒಂದು ತಮಿಳುನಾಡಿನ ಊಟಿಯ ಬಳಿ ಇಂದು ಪತನಗೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿದ ಘಟನೆ ಜರುಗಿದೆ.
ಅಪಘಾತದ ಸ್ಥಳದಿಂದ 11 ಶವಗಳು ಪತ್ತೆಯಾಗಿವೆ ಮತ್ತು ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದೆ
ಹೆಲಿಕ್ಯಾಪ್ಟರ್ ನಲ್ಲಿ 14 ಮಂದಿಯಲ್ಲಿ ಜನರಲ್ ರಾವತ್ ಸ್ಥಿತಿ ಗಂಭೀರವಾಗಿದೆ. ಅವರ ಪತ್ನಿ ಮಧುಲಿಕ ರಾವತ್ ಹಾಗೂ ರಕ್ಷಣಾ ಸಹಾಯಕರು, ಭದ್ರತಾ ಕಮಾಂಡೋಗಳು ಮತ್ತು ಭಾರತೀಯ ವಾಯುಪಡೆ ಸಿಬ್ಬಂದಿ ಸೇರಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ವಿಮಾನದಲ್ಲಿದ್ದರು ಎಂದು ಭಾರತೀಯ ವಾಯುಪಡೆ ಟ್ವೀಟ್ನಲ್ಲಿ ಖಚಿತಪಡಿಸಿದೆ.
ಅವರು ಇಂದು ಮುಂಜಾನೆ ದೆಹಲಿಯಿಂದ ಸೂಲೂರಿಗೆ ವಿಮಾನವನ್ನು ತೆಗೆದುಕೊಂಡಿದ್ದರು ಮತ್ತು ಆ ಫ್ಲೈಟ್ ಮ್ಯಾನಿಫೆಸ್ಟ್ ಒಂಬತ್ತು ಜನರನ್ನು ಹೊಂದಿತ್ತು. “ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ಇಂದು ತಮಿಳುನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿದೆ.
ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ.