ತಮಿಳುನಾಡಿನ ವೆಲ್ಲೂರಿನಲ್ಲಿ ಮನೆ ಕುಸಿದು 9 ಮಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ ಜರುಗಿದೆ.
ನಾಲ್ವರು ಮಹಿಳೆಯರು, ಒಬ್ಬ ಪುರುಷ ಹಾಗೂ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.
ಕಳೆದ 7 ದಿನಗಳ ಹಿಂದಷ್ಟೇ ಮನೆ ಗೃಹ ಪ್ರವೇಶ ಮಾಡಲಾಗಿತ್ತು, ವೆಲ್ಲೂರಿನಲ್ಲಿ ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ.
ಈ ದುರಂತದಲ್ಲಿ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರು ಹಾಗೂ ಗಾಯಾಳಿಗೆ 50 ಸಾವಿರ ರು ಸಕಾ೯ರ ಪರಿಹಾರ ನೀಡಿದೆ.