ಸ್ಪಂದನ ಹಾಸ್ಪಿಟಲ್ ಹಾಗೂ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಹಾಗೂ ಸ್ವಾಭಿಮಾನಿ ಪಡೆ ಸಹಯೋಗದಲ್ಲಿ ಯಂಗ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಷ್ ಜನ್ಮದಿನದ ಅಂಗವಾಗಿ ಅ.3 ರಂದು ಹಾಲಹಳ್ಳಿ ಸ್ಲಂ ಬಡಾವಣೆಯಲ್ಲಿರುವ ಪಟ್ಟಲದಮ್ಮ ದೇವಸ್ಥಾನದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಉಚಿತ ಹೃದ್ರೋಗ ತಪಾಸಣೆ, (ಇಸಿಜಿ ಹಾಗೂ ತಜ್ಞ ವೈದ್ಯರಿಂದ ಸಂದರ್ಶನ) ಉಚಿತ ಕಣ್ಣಿನ ತಪಾಸಣಾ ಹಾಗೂ ದೃಷ್ಟಿ ತಪಾಸಣೆ, ಬಿ.ಪಿ. ಷುಗರ್ ಅಸ್ತಮಾ ಖಾಯಿಲೆಗಳಿಗೆ ಸಂಬಂಧಿಸಿದಂತೆ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಪಾಸಣೆ, ಮೂಳೆ ಮತ್ತು ಕೀಲುರೋಗ ತಪಾಸಣೆ ಶಿಬಿರ ನಡೆಯಲಿದೆ.