ಪತ್ನಿಯೊಬ್ಬಳು ಪತಿಗೆ 4 ಕೋಟಿ ರು ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉದ್ಯಮಿ ಕೃಷ್ಣಾ ಎಂಬುವರಿಗೆ ಪತ್ನಿಯೇ ವಂಚಿಸಿದ್ದಾರೆ.
60 ವರ್ಷದ ಪತ್ನಿ ವಿರುದ್ಧ ಇದೀಗ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಳೆದ ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಿದ್ದರು. ಈ ನಡುವೆ ವಿಚ್ಚೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದರು.
ಜೊತೆಗೆ ಗಂಡನ ವಿರುದ್ಧ ಕೋರ್ಟ್ ನಲ್ಲಿ ಪತ್ನಿ ಗಂಡ ನನಗೆ ಮಾನಸಿಕ ಹಿಂಸೆ ಕೊಡುತ್ತಾರೆ ಎಂದು ಪೋಲಿಸರಿಗೆ ದೂರು ನೀಡಿದ್ದಾಳೆ.
ಈ ವೇಳೆ ಕೇಸ್ ವಾಪಸ್ ತೆಗೆದುಕೊಂಡು ಡೈವೋರ್ಸ್ ಕೊಡು ಅಂತ ಪತಿ ಹೇಳಿದ್ದರಂತೆ. 4 ಕೋಟಿ ರು ಕೊಟ್ರೆ ಎಲ್ಲವನ್ನೂ ಕ್ಲೀಯರ್ ಮಾಡ್ತೀನಿ ಅಂತ ಪತ್ನಿ ಹೇಳಿದ್ದರಂತೆ.
ಡಿಡಿ ಮೂಲಕ ಪತಿ 4 ಕೋಟಿ ಕೊಟ್ಟಿದ್ದರಂತೆ ಇದೀಗ ಕೇಸ್ ವಾಪಸ್ ಪಡೆದುಕೊಳ್ಳದೇ ಪತ್ನಿ ಎಸ್ಕೇಪ್ ಆಗಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.
ಇನ್ನು ಕೋರ್ಟ್ ವಿಚಾರಣೆಗೂ ಸಹ ಮಹಿಳೆ ಹಾಜರಾಗಿಲ್ಲ. ಸದ್ಯ ಬೆಂಗಳೂರು ಬಿಟ್ಟು ಮಹಿಳೆ ಬೇರೆಡೆ ಹೋಗಿದ್ದು ಆಕೆಯನ್ನ ಕರೆತಂದು ಹಣ ಕೊಡಿಸುವಂತೆ ಪತಿ ಕೃಷ್ಣಾ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ.
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ