ಮೂವರು ದರೋಡೆಕೋರರು ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಗೆ ದಾಳಿ ಮಾಡಿ ಚಿನ್ನಾಭರಣ ದೋಚಿದ್ದಾರೆ. ಅವರನ್ನು ತಡೆಯಲು ಬಂದ ಯುವಕನಿಗೆ ಗುಂಡೇಟು ಹೊಡೆದು ಪರಾರಿಯಾದ ಘಟನೆ ಸೋಮವಾರ ಜರುಗಿದೆ.
ಮೂವರು ದರೋಡೆಕೋರರ ತಂಡ ಬೈಕ್ ನಲ್ಲಿ ಬಂದು ದಿಢೀರ್ ಚಿನ್ನ, ಬೆಳ್ಳಿ ಅಂಗಡಿಗೆ ನುಗ್ಗಿ ಆಭರಣ ಕಳ್ಳತನ ಮುಂದಾಗಿದ್ದಾರೆ.
ಈ ವೇಳೆ ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಅವರನ್ನು ತಡೆಯಲು ಮುಂದಾಗಿದ್ದಾನೆ. ಆಗ ಧರ್ಮೇಂದ್ರನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ಏಟಿಗೆ ಆತ ಅಂಗಡಿಯಲ್ಲೆ ಕುಸಿದು ಬಿದ್ದಿದ್ದಾನೆ.
ಚಿನ್ನದ ಅಂಗಡಿಯಿಂದ ಹೋಗುವಾಗ ರಸ್ತೆಯಲ್ಲಿ ಈ ದೃಷ್ಯ ಕಂಡು ದರೋಡೆಕೋರರನ್ನು ತಡೆಯಲು ಮುಂದಾದ ದಡದಹಳ್ಳಿ ಗ್ರಾಮದ ಚಂದ್ರು ಮೇಲೆ ಕೂಡ ಶೂಟ್ ಔಟ್ ಮಾಡಿದ್ದಾರೆ.
ಗುಂಡಿನ ದಾಳಿಯಿಂದಾಗಿ ಆತನ ತಲೆ ಸೀಳಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಧರ್ಮೇಂದ್ರಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಶೂಟ್ ಔಟ್ ಪ್ರಕರಣದಿಂದಾಗಿ ಮೈಸೂರಿನ ಜನರು ಬೆಚ್ಚಿ ಬಿದ್ದಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು