ಆದಷ್ಟು ಶೀಘ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಯಾದಗಿರಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸಚಿವರು ಮಾತನಾಡಿದರು. ಶಿಕ್ಷಕರ ವರ್ಗಾವಣೆ ಹಾಗೂ ಹೊಸ ಶಿಕ್ಷಕರ ನೇಮಕಾತಿ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು.
ಈ ಹಿಂದಿನ ಶಿಕ್ಷಣ ಸಚಿವರ ಕೆಲಸಗಳನ್ನು ಕಾರ್ಯಗತಗೊಳಿಸಲು ಶ್ರಮಿಸಲಾಗುವುದು. ಅವರ ಸಲಹೆ ಪಡೆಯಲಾಗುವುದು. ತಮಗೆ ಶಿಕ್ಷಣ ಖಾತೆ ಲಭಿಸಿರುವುದರಿಂದ ಸಂತಸವಾಗಿದೆ. ತಮ್ಮ ಮೇಲೆ ನಂಬಿಕೆ ಇಟ್ಟು ಸವಾಲಿನ ಖಾತೆ ಕೊಟ್ಟ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಸಂಘಟನೆಯ ಬಲ ತಮ್ಮ ಜತೆಗೆ ಇರುವುದಿರಿಂದ ಮುಂದೆ ಬರುವ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದರು.