February 25, 2026

Newsnap Kannada

The World at your finger tips!

dam,rain,water

ಕೆಆರ್ ಎಸ್ ಆಣೆಕಟ್ಟೆಗೆ 30 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು

Spread the love

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಆಣೆಕಟ್ಟೆಗೆ 30, 776 ಕ್ಯುಸೆಕ್ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಕೆಆರ್ ಎಸ್ ನೀರಿನ‌ ಮಟ್ಟ 105 ಅಡಿ ಗಡಿ ದಾಟಿದೆ. ನದಿಯೂ ಸೇರಿದಂತೆ ನಾಲೆಗಳಿಗೆ 6419 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಹಾರಂಗಿ ಮತ್ತು ಹೇಮಾವತಿ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಆಣೆಕಟ್ಟೆಯ ಒಳ ಹರಿವು ಹೆಚ್ಚಾಗಿದೆ.‌

ಕೆ.ಆರ್.ಸಾಗರ ಅಣೆಕಟ್ಟೆ ನೀರಿನ ಮಟ್ಟ:

ಗರಿಷ್ಠ ನೀರಿನ ಮಟ್ಟ 124.80 ಅಡಿ

ಇಂದಿನ ನೀರಿನಮಟ್ಟ-105.76 ಅಡಿ

ಒಳಹರಿವು-30776 ಕ್ಯುಸೆಕ್

ಹೊರ ಹರಿವು-6419 ಕ್ಯುಸೆಕ್

ನೀರಿನ ಸಂಗ್ರಹ-27.671 ಟಿಎಂಸಿ

error: Content is protected !!