ನನ್ನ ಬಳಿ ‘ ಆ’ ಆಸ್ತಿಯನ್ನು ದರ್ಶನ್ ಕೇಳಿದ್ದು ನಿಜ – ಕೊಡಲ್ಲ ಅಂದೆ ನಿರ್ಮಾಪಕ ಉಮಾಪತಿ

Team Newsnap
1 Min Read

ನಟ ಪುನೀತ್, ರಾಘವೇಂದ್ರ ರಾಜಕುಮಾರ್ ಹೆಸರಿನ ಆಸ್ತಿ ಖರೀದಿಗೆ ದರ್ಶನ್ ಬಯಸಿದ್ದರು.‌ ಈ ಲೋನ್’ ಕದನಕ್ಕೆ ‘ಆಸ್ತಿ’ ಜಗಳ ಮೂಲ ಕಾರಣವಾಯಿತೆ ಎಂಬ ಅನುಮಾನ ಕಾಡಿದೆ.

ನಟ ದರ್ಶನ್, ಅರುಣಾ ಕುಮಾರಿ ಮತ್ತು ನಿರ್ಮಾಪಕ ಉಮಾಪತಿ ಲೋನ್ ಕದನಕ್ಕೆ ಸ್ಫೋಟಕ ಟ್ವಿಸ್ಟ್ ಕೂಡ ಸಿಕ್ಕಿದೆ.

ಈ ಲೋನ್ ಕದನಕ್ಕೆ ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಜಗಳ ಕಾರಣನಾ ಅನ್ನೋ ಪ್ರಶ್ನೆಯೊಂದು ಎದುರಾಗಿದೆ.‌

ಉಮಾಪತಿ ಅವರೇ, ನನ್ನ ಬಳಿಯಲ್ಲಿರುವ ಆಸ್ತಿಯನ್ನು ದರ್ಶನ್ ಕೇಳಿದ್ದು ನಿಜ, ನಾನು ಕೊಡಲ್ಲ ಅಂತ ಹೇಳಿರೋದು ಸಹ ನಿಜ ಅಂತ ಒಪ್ಪಿಕೊಂಡಿದ್ದಾರೆ.

ಅರುಣಾ ಕುಮಾರಿ ಬ್ಯಾಂಕ್ ಲೋನ್ ವಿಷಯ ಮತ್ತೊಂದು ಆಯಾಮ ಪಡೆದುಕೊಳ್ಳುವುದು ಬೇಡ. ಅರುಣಾ ಕುಮಾರಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದ್ರೆ ಪ್ರಾಪರ್ಟಿ ವಿಚಾರ ಮುಗಿದಿರೋದು ಅಧ್ಯಾಯ. ಈ ವಿಷಯವನ್ನು ಮುಂದುವರಿಸಲು ನನಗೂ ಮತ್ತು ದರ್ಶನ್ ಅವರಿಗೆ ಇಷ್ಟವಿಲ್ಲ ಎಂದರು.

Share This Article
Leave a comment