ಮಂಗಾರು ಮಳೆ ಗಣೇಶ್ ಥರ ಇದ್ದವರು ಈಗ ವಜ್ರಮುನಿ ಥರಾ ಆಡ್ತಿರಾ ಎಂದು ಶಾಸಕ
ರವೀಂದ್ರ ಶ್ರೀಕಂಠಯ್ಯ ಅವರಿಗೆ ನಿರ್ಮಾಪಕ ರಾಕ್ಲೈನ್ ಟಾಂಗ್ ನೀಡಿದರು.
ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ರೆಬಲ್ ಸ್ಟಾರ್ ಅಂಬರೀಶ್’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ರಾಕ್ಲೈನ್ ವೆಂಕಟೇಶ್ ಕಿಡಿಕಾರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ರಾಕ್ಲೈನ್, ರವೀಂದ್ರ ಶ್ರೀಕಂಠಯ್ಯನವರೇ ನಾನು ನಿಮಗೆ ಒಂದು ಮಾತನ್ನ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ತುಂಬಾ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಆವಾಗ ನಾನು ನಿಮ್ಮನ್ನ ಒಬ್ಬ ಫಿಲಂ ಆ್ಯಕ್ಟರ್ ಥರಾ ನೋಡಿಕೊಂಡು ಬಂದೆ. ಅಲ್ಲದೇ ಒಂದು ಸಿನಿಮಾಗೆ ಬನ್ನಿ ಎಂದು ಕೂಡ ಹೇಳಿದ್ದೆ. ಆವಾಗ ನೀವು ಮುಂಗಾರು ಮಳೆ ಗಣೇಶ್ ಥರಾ ಇದ್ದೀರಿ. ನೀವು ಬೆಳೀತಾ ಬೆಳೀತಾ, ಅದ್ಯಾರ್ ಮಾತುಗಳನ್ನು ಕೇಳಿಕೊಂಡು, ವಜ್ರಮುನಿ ತಮ್ಮ ಪಾತ್ರದಲ್ಲಿ ಯಾವ ರೀತಿ ಮಾಡ್ತಿದ್ದರೋ ಹಾಗೇ ಮಾಡಲು ಶುರುಮಾಡಿದ್ದೀರ.. ವಜ್ರಮುನಿಯ ಹಾಗೆ ಖಳನಾಯಕನ ಥರಾ ಕೂಗಾಡಿಕೊಂಡು, ಹಾರಾಡಿಕೊಂಡು, ಚೀರಾಡಿಕೊಂಡು ಮಾಡುತ್ತಿದ್ದೀರಾ. ಇದು ಒಳ್ಳೆಯದಲ್ಲ.. ಎಂದು ಕಿವಿ ಮಾತು ಹೇಳಿದರು.