ಕರ್ನಾಟಕದಲ್ಲಿ ಈಗಾಗಲೇ 30 ಜಿಲ್ಲೆಗಳಲಿವೆ. ಈಗ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಜಯನಗರವನ್ನು ಒಂದು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಬಹು ದಿನದ ಕನಸು ಈಗ ನನಸಾಗಿದೆ.
ಹೊಸಪೇಟೆ, ಕಂಪ್ಲಿ,ಹಗರಿ ಬೊಮ್ಮನಹಳ್ಳಿ,ಕೊಟ್ಟೂರು,ಹಡಗಲಿ,ಹರಪನಹಳ್ಳಿ ತಾಲೂಕು ಗಳನ್ನು ಸೇರಿಸಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನ 31ನೇ ಜಿಲ್ಲೆಯಾಗಿ ವಿಜಯನಗರ ವನ್ನು ಘೋಷಿಸಲಾಗುತ್ತದೆ. ಈ ಸಂಬಂಧ ಕಾರ್ಯದರ್ಶಿಗಳಿಗೆ ಸಿ.ಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ .