ಕೇಂದ್ರ ಸರ್ಕಾರದ ಹೊಸ ನಿಯಮಗಳನ್ನು ಒಪ್ಪಿಕೊಂಡ ಸಾಮಾಜಿಕ ಜಾಲತಾಣದ ಫೇಸ್ಬುಕ್ ಸಂಸ್ಥೆಗೆ ಭಾರತಕ್ಕೆ ತನ್ನ ಗ್ರೀವೆನ್ಸ್ ಅಧಿಕಾರಿ (ಕುಂದುಕೊರತೆ ಪರಿಹರಿಸುವ ಅಧಿಕಾರಿ)ಯಾಗಿ ಸ್ಫೂರ್ತಿ ಪ್ರಿಯಾ ಅವರನ್ನು ನೇಮಕ ಮಾಡಿದೆ.
ಈ ಕುರಿತು ಫೇಸ್ಬುಕ್ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿ ಸರ್ಕಾರದ ಹೊಸ ನಿಯಮಗಳ ಪ್ರಕಾರ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ತಮ್ಮ ವೆಬ್ಸೈಟ್ನಲ್ಲಿ ಕುಂದುಕೊರತೆ ಅಧಿಕಾರಿಯ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಸಹ ಪ್ರಕಟಿಸಬೇಕು.
ಈ ಮೂಲಕ ಬಳಕೆದಾರರು ಸುಲಭವಾಗಿ ಗ್ರೀವೆನ್ಸ್ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು.
- 24 ಗಂಟೆಗಳ ಒಳಗೆ ದೂರನ್ನು ಅಂಗೀಕರಿಸಬೇಕು ಮತ್ತು ದೂರು ಸಲ್ಲಿಸಿದ ದಿನಾಂಕದಿಂದ 15 ದಿನಗಳ ಒಳಗೆ ಅದನ್ನ ವಿಲೇವಾರಿ ಮಾಡಬೇಕು. ಇದನ್ನು ಗ್ರೀವೆನ್ಸ್ ಅಧಿಕಾರಿ ನೋಡಿಕೊಳ್ಳತ್ತಾರೆ.
- ಅಧಿಕಾರಿಗಳು ನೀಡುವ ಯಾವುದೇ ಆದೇಶ, ಸೂಚನೆ ಅಥವಾ ನಿರ್ದೇಶನವನ್ನು ಸ್ವೀಕರಿಸಿ ಅಂಗೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಗ್ರೀವೆನ್ಸ್ ಅಧಿಕಾರಿಗೆ ವಹಿಸಲಾಗಿದೆ.