ಬೆಂಗಳೂರು, ಚಿಕ್ಕಬಳ್ಳಾಪುರ ಜೈಲಿನ 37 ಮಂದಿ‌ ಕೈದಿಗಳಿಗೂ ಕೊರೋನಾ ಸೋಂಕು

Team Newsnap
1 Min Read

ದೇಶಾದ್ಯಂತ ಕೊರೊನಾ ರೌದ್ರ ನರ್ತನ ಮುಂದುವರಿದಿದೆ. ಬೆಂಗಳೂರಿನ ಪರಪ್ಪನ‌ ಅಗ್ರಹಾರದಲ್ಲಿ‌ನ ಕೇಂದ್ರ ಬಂಧೀಖಾನೆಯಲ್ಲಿ 30 ಹಾಗೂ ಚಿಕ್ಕಬಳ್ಳಾಪುರ ಜೈಲಿನ 7 ಮಂದಿ ಕೈದಿಗಳಿಗೆ ಕೊರೋನಾ ಸೋಂಕು ದೃಡ ಪಟ್ಟಿದೆ .

ಬೆಂಗಳೂರಿನ‌ ಕೇಂದ್ರ ಕಾರಾಗೃಹದಲ್ಲಿ ಪಾಸಿಟಿವ್ ಬಂದಿರುವ 30 ಕೈದಿಗಳನ್ನು ಭವನಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಾರಾಗೃಹ ವನ್ನು ಸಂಪೂರ್ಣವಾಗಿ ಸ್ಯಾನಿಟೈಜರ್ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 7 ಜನ ಜನರಿಗೆ ಸೋಂಕು ತಗುಲಿದೆ.

ಅಣಕನೂರು ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹದಲ್ಲಿನ 7 ಮಂದಿ ಖೈದಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಜೈಲಿಗೂ ಕೊರೊನಾ ಸೋಂಕು ಹಬ್ಬಿದಂತಾಗಿದೆ. ಇದರಿಂದಾಗಿ ಇತರೆ ಖೈದಿಗಳು ಹಾಗೂ ಜೈಲು ಸಿಬ್ಬಂದಿಗೆ ಆತಂಕ ಶುರುವಾಗಿದೆ.

Share This Article
Leave a comment