ರಾಜ್ಯದಲ್ಲಿ ಕೊರೋನಾ ರುದ್ರ ನರ್ತನ : 25 ಸಾವಿರ ಗಡಿ ದಾಟಿದ ಕೊರೋನಾ 123 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೋನಾ ಗುರುವಾರ ರುದ್ರನರ್ತನ ಮಾಡಿದೆ. ಇಂದು ಕೊರೋನಾ ಸೋಂಕು 25 ಸಾವಿರ ಗಡಿ ದಾಟಿದೆ. ಕೊರೋನಾಗೆ 123 ಮಂದಿ ಬಲಿಯಾಗಿದ್ದಾರೆ.‌
ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12,47,997 ಕ್ಕೆ ಏರಿಕೆಯಾಗಿದೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 17,056 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,45,478 ಆರ್​ಟಿಪಿಸಿಆರ್ ಟೆಸ್ಟ್​ಗಳು ಸೇರಿದಂತೆ ಒಟ್ಟು 1,62,534 ಕೊರೊನಾ ಟೆಸ್ಟ್​ಗಳನ್ನು ನಡೆಸಲಾಗಿದೆ.

ಈ ಪೈಕಿ 25,795 ಜನರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12,47,997 ಕ್ಕೆ ಏರಿಕೆಯಾಗಿದೆ.

ಇಂದು ಸೋಂಕಿನಿಂದ ಗುಣಮುಖರಾಗಿ 5,624 ಮಂದಿ ಡಿಸ್ವಾರ್ಜ್ ಆಗಿದ್ದಾರೆ. ಈವರೆಗೆ 10,37,857 ಮಂದಿ ಗುಣಮುಖರಾದಂತಾಗಿದೆ.

ಸೋಂಕಿನಿಂದಾಗಿ ಇಂದು 123 ಮಂದಿ ಸಾವನ್ನಪ್ಪಿದ್ದಾರೆ. 13,885 ಮಂದಿ ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಸದ್ಯ ರಾಜ್ಯದಲ್ಲಿ 1,96,236 ಆ್ಯಕ್ಟಿವ್ ಕೇಸ್​ಗಳಿದ್ದು ಈ ಪೈಕಿ 243 ಮಂದಿ ಐಸಿಯುಗಳಲ್ಲಿ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟನೆಯಲ್ಲಿ ಹೇಳಿದೆ.

ಜಿಲ್ಲಾವಾರು ವಿವರ:

ಬಾಗಲಕೋಟೆ 134
ಬಳ್ಳಾರಿ 940
ಬೆಳಗಾವಿ 255
ಬೆಂಗಳೂರು ಗ್ರಾಮಾಂತರ 405 ಬೆಂಗಳೂರು ನಗರ 15244
ಬೀದರ್ 396
ಚಾಮರಾಜನಗರ 271
ಚಿಕ್ಕಬಳ್ಳಾಪುರ 146
ಚಿಕ್ಕಮಗಳೂರು 146
ಚಿತ್ರದುರ್ಗ 142
ದಕ್ಷಿಣ ಕನ್ನಡ 474
ದಾವಣಗೆರೆ 157
ಧಾರವಾಡ 361
ಗದಗ 73
ಹಾಸನ 689
ಹಾವೇರಿ 46
ಕಲಬುರಗಿ 659
ಕೊಡಗು 156
ಕೋಲಾರ 587
ಕೊಪ್ಪಳ 121
ಮಂಡ್ಯ 385
ಮೈಸೂರು 818
ರಾಯಚೂರು 433
ರಾಮನಗರ 260
ಶಿವಮೊಗ್ಗ 207
ತುಮಕೂರು 1231
ಉಡುಪಿ 274
ಉತ್ತರ ಕನ್ನಡ 163
ವಿಜಯಪುರ 328
ಯಾದಗಿರಿ 111

Share This Article
Leave a comment