ಮೆಟ್ರೋಗೆ ಅನುದಾನ ಕೇಂದ್ರದ ಭಿಕ್ಷೆ ಅಲ್ಲ- ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು:ಎಚ್ ಡಿಕೆ ಆಕ್ರೋಶ

Team Newsnap
1 Min Read

ಕೇಂದ್ರ ಸರ್ಕಾರ ಬೆಂಗಳೂರಿನ 1 ಮತ್ತು 2 ನೇ ಹಂತದ ಮೆಟ್ರೋ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿರುವುದು ರಾಜ್ಯಕ್ಕೆ ನೀಡಿರುವ ಭಿಕ್ಷೆ ಅಲ್ಲ. ಆದರೆ ಈ ರಾಜ್ಯ ಸರ್ಕಾರ, ಕೇಂದ್ರಕ್ಕೆ ಕೃತಜ್ಞತೆ ರೂಪದಲ್ಲಿ ಕೋಟ್ಯಾಂತರ ರು. ಖರ್ಚು ಮಾಡಿ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಕೊರೋನಾ ಎರಡನೇ ಅಲೆ ಭೀಕರತೆಯಿಂದ ಜನ ಸಾಯುತ್ತಿರುವಾಗ ಅಗ್ಗದ ಪ್ರಚಾರಕ್ಕೆ ಈ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ಜಾಹೀರಾತು ನೀಡಿರುವುದರ ವಿರುದ್ದ ಮಾಜಿ ಮುಖ್ಯಮಂತ್ರಿ ಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದೊಂದು ಮೂರ್ಖ ಸರ್ಕಾರ:

ರಾಜ್ಯದಲ್ಲಿ ಕೊರೋನಾ ಹಾವಳಿಯಿಂದ ಅಮಾಯಕರು, ಬಡವರು ಆ್ಯಕ್ಸಿಜನ್ , ಬೆಡ್, ಔಷಧಿ ಒಲ್ಲದೇ ಸಾಯುತ್ತಿದ್ದಾರೆ. ಈ ಮೂರ್ಖ ಸರ್ಕಾರ ಅಗ್ಗದ ಪ್ರಚಾರಕ್ಕೆ ಕೋಟಿ, ಕೋಟಿ ಹಣ ಖರ್ಚು ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿ ಇದೊಂದು ಮೂರ್ಖ ಸರ್ಕಾರ ಎಂದು ಕಟುವಾಗಿ ಟೀಕಿಸಿದ್ದಾರೆ.

ಜನರ ನೋವು , ಸಮಸ್ಯೆಗಳಿಗೆ ಸ್ಪಂದಿಸಿ, ಕೊರೋನಾ ಸಾವುಗಳನ್ನು ತಡೆಯಲು ಮುಂದಾಗಿ. ಹುಚ್ಚು ತೋರಿ ಪ್ರಚಾರದ ಗಿಮಿಕ್ ಗೆ ಹಣ ಸರ್ಕಾರದ ಖಜಾನೆ ಖಾಲಿ ಮಾಡುವ ಬದಲು ಉತ್ತಮ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.

Share This Article
Leave a comment